Archive for the ‘ಮೂಲನಿವಾಸಿ in ನ್ಯೂಸ್’ Category

“ನಾಗಸಿಧ್ಧಾರ್ಥ ಹೊಲೆಯಾರ್”, ವೈಚಾರಿಕ ಸಾಹಿತ್ಯದ ಹೊಸನೀರು


ಖ್ಯಾತ ತತ್ವಶಾಸ್ತ್ರಜ್ಙ ಹೆಚ್.ಡ್ರಮಂಡ್ ವೈಚಾರಿಕತೆಗೆ ಸಂಬಂಧಿಸಿದಂತೆ ಒಂದೆಡೆ ಹೀಗೆ ಹೇಳುತ್ತರೆ. ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ “ಜಾತಿ ನಿಮರ್ೂಲನೆ” ಎಂಬ ಕೃತಿಯ ಮುನ್ನುಡಿಯಲ್ಲಿ ಡ್ರಮಂಡ್ರ ಈ  ಸಾಲುಗಳನ್ನು ಬಳಸಿಕೊಳ್ಳುತ್ತ್ತಾರೆ ಆ ಅದ್ಭುತ ಸಾಲುಗಳು ಇಂತಿವೆ.”ವಿಚಾರ ಮಾಡಲೊಲ್ಲದವನು ಮತಾಂಧ, ವಿಚಾರ ಮಾಡಲರಿಯದವನು ಮೂರ್ಖ, ವಿಚಾರ ಮಾಡಲಂಜುವವನು ಗುಲಾಮ”. ಬಹುಶಃ ವೈಚಾರಿಕತ ೆಅಧಾರಿತ ಸಮಾಜದ ದೃಷ್ಡಿಕೋನ ಹೇಗಿರಬೇಕೆಂಬುದಕ್ಕೆ  ಡ್ರಮಂಡ್ರ ಈ ಸಾಲುಗಳು ಕನ್ನಡಿ ಹಿಡಿಯುತ್ತವೆ. ಇಂದು  ಚಾಮಾರಾಜನಗರದಲ್ಲಿ ಬಿಡುಗಡರೆಯಾಗುತ್ತಿರುವ  ನಾಗಸಿದ್ಧಾರ್ಥ ಹೊಲೆಯಾರರ ‘ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಕೃತಿ ಅಂತಹ ವೈಚಾರಿಕತೆಯ ಸಣ್ಣ ಬಿಂಬ ಎನ್ನಲಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ನಾಗಸಿದ್ಧಾರ್ಥ ಹೊಲೆಯಾರರ ಬದುಕು ಬರಹದ ಸಣ್ಣ ಚಿತ್ರಣ ಇಲ್ಲಿದೆ.
“ನಾಗಸಿದ್ಧಾರ್ಥ ಹೊಲೆಯಾರ್” ಎಂಬ ಕಾವ್ಯನಾಮದಿಂದ ಸಾಹಿತ್ಯ ಲೊಕಕ್ಕೆ ಪರಿಚಯವಾಗುತ್ತಿರುವ ಇವರ ಮೂಲ ಹೆಸರು ರಾಜಶೇಖರಮೂತರ್ಿ. ವೃತ್ತಿಯಲ್ಲಿ ಉಪತಹಸೀಲ್ದಾರರು, ಪ್ರವೃತ್ತಿಯಲಿ ಲೇಖಕ. ಲೇಖಕ ಅನ್ನುವದಕ್ಕಿಂತ ಸಂಶೋದಕ. ಆ ಸಂಶೋಧನೆಗೆ ಅಂಬೇಡ್ಕರ್ವಾದದ ನೆಲೆಗಟ್ಟಿದೆ. ಶೊಷಿತರ ಪರ ಕಾಳಜಿ ಇದೆ. ಸಾಮಾಜಿಕ ಹೊಣೆಗಾರಿಕೆಯ ನಿರತಂರ ತುಡಿತವಿದೆ.
ಸಿದ್ಧಾರ್ಥ ಹೊಲೆಯಾರರ ಜನ್ಮ ಸ್ಥಳ ಚಾಮಾರಾಜನಗರ ತಾಲ್ಲೂಕಿನ ಮಂಗಲ ಹೊಸುರು ಗ್ರಾಮ. ತಂದೆ ಎಸ್ ಬಸವಯ್ಯ, ತಾಯಿ ದೇವಾಜಮ್ಮ . ಇವರದು ಸುಶಿಕ್ಷಿತ ದಲಿತ ಕುಟುಂಬ. ಅಂತಹ ಶಿಕ್ಷಣದ ಸಂಸ್ಕಾರ ಇವರಿಗೆ ಅದುದರಿಂದಲೇ ಬಾಲ್ಯದಿಂದಲೆ ಇವರದು ಪ್ರಶ್ನಿಸುವ ಮನೋಭಾವ. ಕವನಗಳನ್ನು ಕಥೆಗಳನ್ನು ಬರೆಯುವ ಹುಚ್ಚು. ಸಮಾಜದ ಬದಲಾವಣೆಗೆ ತಹತಹಿಸುವ ಗುಣ. ಇಂತಹ ಗುಣವೇ ಇವರನ್ನು ನವದೆಹಲಿಯ ಖ್ಯಾತ ಸಂಶೋಧಕ ಶ್ರೀ ಎನ್. ಕೆ. ಶಮರ್ಾಜಿಯವರ ಸಂಪರ್ಕ ಪಡೆಯುವಂತೆ ಮಾಡಿದ್ದು. “ದಲಿತ್ ವಾಯ್ಸ್ ‘ ಆಂಗ್ಲ ಮಾಸಿಕದಲ್ಲಿ ಇವರ ಒಂದು ಪತ್ರ ಪ್ರಕಟವಾದದ್ದು, ಆ ಪತ್ರದ ಜಾಡು ಹಿಡಿದು ಶ್ರೀ ಎನ್. ಕೆ. ಶಮರ್ಾರವರು ಸಿದ್ಧಾರ್ಥ ಹೊಲೆಯಾರರನ್ನು ತಮ್ಮ ತೆಕ್ಕೆಗೆ ಸೆಳೆದು ಕೊಂಡದ್ದು, ಸಿದ್ದಾರ್ಥ ಹೊ;ಲೆಯಾರರ ವೈಚಾರಿಕತೆಗೆ ನೀರೆರೆದದ್ದು, ಬಹುಶಃ ವ್ಯಕ್ತಿಯೊಬ್ಬರ ಜೀವನಕ್ಕೆ ಸಿಗಬಹುದಾದ ನೈಜ ತಿರುವು ಎನ್ನಬಹುದು. ಸ್ವತಃ ಸಿದ್ಧಾರ್ಥ ಹೊಲೆಯಾರರೆ ” ನಾನೊಬ್ಬ ಲೇಖಕನಾಗಲು ನನಗೆ ಅಂಬೇಡ್ಕರ್ ವಾದದ ದೀಕ್ಷೆ ನೀಡಿದ ನನ್ನ ಪರಮ ಪೂಜ್ಯ ಗುರುಗಳಾದ ನವದೆಹಲಿಯ ಶ್ರೀ ಎನ್ ಕೆ ಶಮರ್ಾರವರೆ ಕಾರಣ ಎನ್ನುತ್ತಾರೆ.  ಪ್ರಸ್ತುತ ಇಂದು ಬಿಡುಗಡೆಯಾಗುತ್ತಿರುವ ಕೃತಿ ಅಂತಹ ಅಂಬೇಡ್ಕರ್ವಾದದ ದೀಕ್ಷೆಯಿಂದ ಒಡಮೂಡಿದ ಕೃತಿ ಎಂದರೆ ಅತಿಶಯೋಕ್ತಿಯೇನಲ್ಲ.
ಹಾಗಿದ್ದರೆ ಈ ಕೃತಿಯಲ್ಲಿ ಅಂತಹದ್ದೇನಿದೆ? ಲೇಖಕರು ಪ್ರಾರಂಭದಲ್ಲೇ ಹೇಳುವ ಹಾಗೆ” ವಿಜ್ಞಾನ ಮತ್ತು ತಂತ್ರ ಜ್ಞಾನವನ್ನು ಅಜ್ಞಾನದ ಪ್ರಚಾರಕ್ಕೆ ದುರ್ಬಳಕೆ ಮಾಡುತ್ತಿರುವುದರಿಂದ ವೀಕ್ಷಕರ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಕಲಿಯುಗದ ಬಗ್ಗೆ ಜನರಲ್ಲಿರುವ ಮೌಢ್ಯ ದ ಬಗ್ಗೆ ಕೆಲವರಲ್ಲಾದರೂ ಜಾಗೃತಿಮೂಡಿಸುವ ಉದ್ದೇಶದಿಂದ ….” ಹೌದು , ಇಲ್ಲಿ ಮೌಢ್ಯದ ವಿರುದ್ಧ ಚಾಟಿಯನ್ನೆ ಬೀಸಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಲೇಖಕರು ಭಾರತದ ಇತಿಹಾಸವನ್ನು ಪುನರ್ರಚಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. “ಬೇಟೆಗಾರರಿಂದ ರಚಿತವಾದ  ಇತಿಹಾಸ” ಆ ಬೇಟೆಗಾರರಿಂದ ತಪ್ಪಿಸಿಕೊಂಡ ಹುಲಿಯ ಇತಿಹಾಸ ಆಗಿರಲು ಹೇಗೆ ಸಾಧ್ಯ? ಎಂದು ಈ ದೇಶದ ಮೂಲನಿವಾಸಿಗಳ ಹಿನ್ನೆಲಿಯಲ್ಲಿ ಭಾರತದ “ಮನು ಪ್ರಣೀತ ” ಇತಿಹಾಸವನ್ನು ಪ್ರಶ್ನಿಸುತ್ತಾರೆ.  ಹಾಗೆ ಪ್ರಶ್ನಿಸುವ ಅವರು  ಸುಮ್ಮನೇ ಕೂರುವುದಿಲ್ಲ. ಇತಿಹಾಸಕ್ಕೆ  ಹೊಸ ಬೆಳಕು ಚೆಲ್ಲು ವ ಪ್ರಯತ್ನವನ್ನೂ ಕೂಡ ಮಾಡುತ್ತಾರೆ. ಉದಾಹರಣೆಗೆ “ನಾಗ ಬೌದ್ಧ ಹೊಲೆಯರ ಇತಿಹಾಸ” ಎಂಬ ಲೇಖನದಲ್ಲಿ,  ” ಹೊಲ” ಎಂದರೆ “ಭೂಮಿ,” “ಹೊಲೆಯ” ಎಂದರೆ “ಹೊಲದ ಒಡೆಯ” ಎಂದು ಹೊಲೆಯ  ಎಂಬ ಪದಕ್ಕೆ ಹೊಸ ಅರ್ಥವನ್ನೇ ನೀಡುತ್ತಾರೆ. ಮತ್ತು ಇದಕ್ಕೆ ಸೂಕ್ತ ಆಧಾರವನ್ನು ಸಹ ನೀಡುತ್ತಾರೆ, ಮತ್ತೊಂದೆಡೆ ಅಂಬೇಡ್ಕರ್ರವರು “ಅಸ್ಪೃಶ್ಯರು ಮೂಲತಃ ನಾಗ ಜನಾಂಗದವರು” ಎಂದಿರುವುದಕ್ಕೆ ಸಮರ್ಥನೆಯಾಗಿ ಲೇಖಕರು, “ನಾಗರೀಕ”, “ನಾಗರೀಕತೆ”, “ನಗರ” ಈ ಪದಗಳು “ನಾಗ ಜನಾಂಗ ದ  ವ್ಯಕಿ”್ತಯನ್ನು, “ನಾಗ ಜನಾಂಗದ ಸಂಸ್ಕೃತಿ”ಯನ್ನು, ಮತ್ತು “ಅವರು ವಾಸಿಸುತ್ತಿದ್ದ ಸ್ಥಳ”ಗಳನ್ನು ಸೂಚಿಸುತ್ತಿದ್ದವು ಎನ್ನುತ್ತಾರೆ.
ಒಟ್ಟಾರೆ ಹೊಲೆಯಾರರು ತಮ್ಮ ಈ ಕೃತಿಯಲ್ಲಿ ಇತಿಹಾಸವೆಂಬ ಗೀಜಗನ ಗೂಡಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ. ಉದಹರಣೆಗೆ “ಬೌದ್ಧ ಬಿಕ್ಕು ಯೇಸು ಕ್ರಿಸ್ತ” ಎಂಬ ಲೇಖನ ಅಂತಹ ಪ್ರಯತ್ನಗಳಲ್ಲೊಂದು. ಅದಲ್ಲದೇ “ಪೇಜಾವರ ಶ್ರೀಗಳಿಗೊಂದು ಬಹಿರಂಗ ಪತ್ರ” ಎಂಬ ಲೇಖನದಲ್ಲಿ, “ಬುದ್ಧ, ಬೌದ್ಧ ಬಿಕ್ಕು ಮತ್ತು ಬಿಕ್ಕುಣಿಯರನ್ನು ಧರ್ಮಸ್ಥಳ ಮಂಜುನಾಥ, ತಿರುಪತಿಯ ಬಾಲಾಜಿ, ಕೇದಾರನಾಥ, ಶ್ರೀ ರಂಗನಾಥ,ಪುರಿಯ ಜಗನ್ನಥ, ಕಾಶಿ ವಿಶ್ವನಾಥ, ಕಂಚಿ ಕಾಮಕ್ಷಿ, ಮಧುರೈ ಮೀನಾಕ್ಷಿ, ಎಲ್ಲಮ್ಮ, ಪೊಲ್ಲಮ್ಮ, ಮಾರಮ್ಮ  ಇತ್ಯಾದಿ ರೂಪಗಳಲ್ಲಿ ಪೂಜಿಸಲಾಗುತ್ತಿದೆ” ಎಂದು ಇತಿಹಾಸದ  ಬುಡವನ್ನೆ ಅಲುಗಾಡಿಸುವ ಪ್ರಯತ್ನ ಮಾಡಿದ್ದಾರೆ.
ಇದಿಷ್ಟೆ ಅಲ್ಲದೆ ಅಸ್ಪೃಶ್ಯರ ಮಧ್ಯೆ ಇರುವ “ಎಡಗೈ-ಬಲಗೈ” ಸಮಸ್ಯೆಯ ಬಗ್ಗೆ ಮಾನವೀಯ ಕಳಕಳಿಯ       ಹಿನ್ನೆಲೆಯಲ್ಲಿ ಬರೆಯುವ ಲೇಖಕರು , ಸಮಾಜದ ಅತ್ಯಂತ ತಳಸಮುದಾಯವಾದ ಜಲಗಾರರ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತಾ ” ಚಂದ್ರ ಲೋಕವೆಂಬ ನಿಜರ್ೀವ ಲೋಕದ ಬಗ್ಗೆ ತರಲೆಕೆಡಿಸಿಕೊಳ್ಳುವ ವಿಜ್ಞಾನಿಗಳು ಮ್ಯಾನ್ ಹೋಲ್ಗಳನ್ನು ಶುಚಿಗೊಳಿಸಲು ಇನ್ನೂ ಏಕೆ ಒಂದೂ ಯಂತ್ರವನ್ನು ಕಂಡುಹಿಡಿದಿಲ್ಲ? ಎಂದು ಆತಂಕದಿಂದ ಪ್ರಶ್ನಿಸುತ್ತಾರೆ.  ಆ ನಿಟ್ಟಿನಲಿ ಮಾಹಿತಿತಂತ್ರಜ್ಞಾನ (ಐ. ಟಿ), ಜೈವಿಕ ತಂತ್ರಜ್ಞಾನ(ಬಿ,ಟಿ) ಯ ಹಾಗೆ ಶೌಚ ತಂತ್ರಜ್ಞಾನ (ಣಛಿಚಿತಜಟಿರರ ಖಿಜಛಿಟಿಠಟಠರಥಿ)  ಕೂಡ ಅಭಿವೃದ್ಧಿಯಾಗಬೇಕು ಎಂಬ ಗಂಭೀರ ಸಲಹೆಯನ್ನು ನೀಡುತ್ತಾರೆ.
ಒಟ್ಟಾರೆ ನಾಗಸಿದ್ಧಾರ್ಥ ಹೊಲೆಯಾರರ ಈ ಕೃತಿ ಮಾನವ ಪರ ಕಾಳಜಿಯ ಕೃತಿಯಾಗಿದೆ. ಅದಕ್ಕೆ ಹೊಸ ದಿಕ್ಕು ಸೂಚಿಸುವ ಛಾತಿ ಇದೆ.  ಎಲ್ಲವನ್ನು ನೇರವಾಗಿ ಹೇಳುವ ದಿಟ್ಟ ಗುಣ ಇದೆ. ಈ ಸಂಧರ್ಭದಲ್ಲಿ  ಖ್ಯಾತ ಚಿಂತಕ ಜೆ. ಆರ್. ಲಾವೆಲ್ರ ಹೇಳಿಕೆ ಇಲ್ಲಿ ಉಲ್ಲೇಖನೀಯ, “ನಾವು ಮಾತನಾಡುತ್ತೇವೆ ನಮ್ಮನ್ನು ಎಲ್ಲರೂ ಕೇಲಿಸಿಕೊಳ್ಳಲಿ. ಇದರಿಂದ  ಪ್ರಪಂಚದ ವ್ಯವಸ್ಥೆ ಬಿರುಕು ಬಿಟ್ಟರೂ ಬಿಡಲಿ, ನಾವು ಒಂದು ಶಬ್ಧವನ್ನೂ ಬಚ್ಚಿಡುವುದಿಲ್ಲ. ಆಡಿದ ಒಂದು ಅಕ್ಷರವನ್ನೂ ಹಿಂದಕ್ಕೆ ತೆಗೆದು ಕೊಳ್ಳುವುದಿಲ್ಲ. ಅಂಜುಬುರುಕರು ಅಂಜುತ್ತಿರಲಿ , ಹೇಡಿಗಳು ಹಿಂಜರಿಯಲಿ, ಸಂಪ್ರದಾಯವಾದಿಗಳು ಎದುರಾಗಿ ನಿಲ್ಲಲಿ, ನಾವು ಯಾವುದನ್ನು ಧೈರ್ಯದಿಂದ ವಿಚಾರಿಸಿದ್ದೇವೆಯೋ ಅದನ್ನು ಹೇಳುವ ಧೈರ್ಯವು ನಮಗಿದೆ.”                                                                                                        ನಾಗಸಿದ್ಧಾರ್ಥ ಹೊಲೆಯಾರರು ಎಲ್ಲವನ್ನು ಧೈರ್ಯದಿಂದ ಹೇಳಿದ್ದಾರೆ. ಅವರು ಯಾವುದನ್ನೂ ಬಚ್ಚಿಟ್ಟಿಲ್ಲ. ಹಿಂಜರಿಯಲು ಹೋಗಿಲ್ಲ      , ಅಂಜಿಕೆಯಂತೂ ಇಲ್ಲವೇ ಇಲ್ಲ. ಆದರೆ ಎಲ್ಲರೂ ಕೇಳಿಸಿ ಕೊಳ್ಳಲಿ ಎಂಬ ಕಳಕಳಿ ಇದೆ. ತನ್ನ ವಿಚಾರಗಳನ್ನು  ಎಲ್ಲರಿಗೂ ಮುಟ್ಟಿಸಬೇಕೆಂಬ ಅಧಮ್ಯ ಉತ್ಸಾಹವಿದೆ. ಮತ್ತು ಹಾಗಯೇ ಸಮಯ ಕೂಡ ಇದೆ ಯಾಕೆಂದರೆ ಸಿದ್ಧಾರ್ಥ ಹೊಲೆಯಾರರಿಗೆ ಈಗಿನ್ನೂ ನಲವತ್ತು.
ಒಟ್ಟಿನಲಿ ನಾಗಸಿದ್ಧಾರ್ಥ ಹೊಲೆಯಾರರ ” ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಈ ಕೃತಿ ವೈಚಾರಿಕ ಸಾಹಿತ್ಯಕ್ಕ್ಕೆ ಹರಿದು ಬರುತ್ತಿರುವ ಸಣ್ಣ ತೊರೆ. ಓದುಗರು ಅದರ ಒಂದೊಂದು ಗುಟುಕನ್ನೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಸ್ವೀಕರಿಸಬೇಕಾಗಿದೆ. ಕಡೆಯದಾಗಿ ಕನ್ನಡ ಮರಾಠಿಯ ಮೊದಲ ದಲಿತ ಲೇಖಕ ಎಂದು ಗುರುತಿಸಲ್ಪಡುವ ದೇವರಾಯ ಹಿಂಗಳೆಯವರು ಅಂಬೇಡ್ಕರರನ್ನು ಕುರಿತು ಒಂದು ಕವನ ಬರೆದಿದ್ದಾರೆ. ಅದರ ಒಂದೆರಡು ಸಾಲುಗಳು  ಇಂತಿವೆ.
ಅವನು ಸೂರ್ಯ
ನಾವು ಅವನ ತುಣುಕುಗಳು
ಲೇಖಕ ನಾಗಸಿದ್ಧಾರ್ಥ ಹೊಲೆಯಾತರರು ಅಂತಹ ತುಣುಕಿನ ಒಂದಂಶವಾಗಿ ಬೆಳಗಲಿ, ಕನ್ನಡ ಸಾಹಿತ್ಯದ ಆಸ್ತಿಯಾಗಲಿ ಎಂಬುದಷ್ಟೆ ಈ ಲೇಖನದ ಕಳಕಳಿ.
-ರಘೋತ್ತಮ ಹೊ.ಬ

ಚಾಮರಾಜನಗರ-571313
ಮೊಬೈಲ್-9481189116

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ


ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ

ರವಿವಾರ – ಜೂನ್ -27-2010

varthabharathi

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ. ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು. ಬಾಲ್ಯ ದಿಂದಲೇ ಅಸ್ಪಶತೆಯ ನೋವನ್ನು ಅನುಭವಿಸಿ ದರು. ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು.

ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರ್ ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿ ಕೊಂಡರು. ಅಸ್ಪಶರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದ ಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೇ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!

ಹಾಗಿದ್ದರೆ ಅಂಬೇಡ್ಕರ್‌ರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕದ ಅಧ್ಯಕ್ಷ ಜಾರ್ಜ್‌ಬುಷ್ ‘ಗಾಂಧಿ, ಠಾಗೋರ್ ಮತ್ತು ನೆಹರೂ’ರವರನ್ನು ನವ ಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕಬ್ಜರನ್ನಾಗಿ ಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿರುವಾಗ ಬುಷ್‌ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿ ಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರ್‌ರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

ಹಾಗಿದ್ದರೆ ಅಸ್ಪಶರ ಉದ್ಧಾರವನ್ನು ಸಂವಿ ಧಾನ ರಚನೆಯನ್ನು ಹೊರತುಪಡಿಸಿ ಅಂಬ್ಕೇಡರ್‌ರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾ ಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ, ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್.

ಈ ದೇಶದ ಮಹಿಳೆಯ ರಿಗೆ ‘ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಸ್ಥಾಪಿಸಲು ಕಾರಣರಾ ದದ್ದು ಕೂಡ ಅಂಬೇಡ್ಕರ್‌ರೆ.

ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು. ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‌ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೇ!

ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್‌ರಿಂದ ರಚಿಸಲ್ಪಟ್ಟಿತು. ಅಂಬೇ ಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.

ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‌ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!

ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.

ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ. ದುರಂತ ವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

ಅಂಬೇಡ್ಕರ್‌ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ (ಆರ್‌ಬಿಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೊರಟ್‌ರವರು ಇದನ್ನು ದಾಖಲಿಸುತ್ತಾರೆ. ”ಆರ್‌ಬಿಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್‌ಬಿಐನ ಮಾರ್ಗದರ್ಶಿ ಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ.

ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ’ ಎನ್ನುತ್ತಾರೆ ಸುಖದೇವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್’ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‌ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು.

ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದುದನ್ನು ಗಮನಿಸಿ ಅಂಬೇಡ್ಕರ್‌ರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳು ತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

ಮತ್ತೊಂದು ವಿಷಯ ಇಲ್ಲಿ ಹೇಳಲೇಬೇಕಾಗಿದೆ. ಇತ್ತೀಚೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೆ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್‌ರ ಕೊಡುಗೆಯಾದರೂ ಏನು? ಎಂಬುದು.

ಖಂಡಿತ ಏನೂ ಇಲ್ಲ. ಎಸ್.ಬಿ.ಐ. ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ರಿಂದ ‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು’ ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು!

ದುರಂತ ವೆಂದರೆ ಅಸ್ಪಶತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿಸಾಕ್ತಿಗಳಿಗೆ ಅಂಬೇಡ್ಕರ್‌ರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!

ಇನ್ನು ಈ ನಡುವೆ ಅಂತರಾಜ್ಯ ಸಮಸ್ಯೆ ಗಳ ಬಗ್ಗೆ ಅಂಬೇಡ್ಕರ್‌ರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೇ ಅಂಬೇಡ್ಕರ್ ತಮ್ಮ ‘ಭಾಷಾವಾರು ಪ್ರಾಂತ್ಯ ಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡು ತ್ತಾರೆ.

ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾ ದದ್ದು. ಯಾಕೆಂದರೆ 2000ದಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢ ಮತ್ತು ಬಿಹಾರದಿಂದ ಜಾರ್ಖಂಡ್ ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್‌ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರ್‌ರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)

ಅಂಬೇಡ್ಕರ್‌ರನ್ನು ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು, ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು.

‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರ್‌ರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

-ರಘೋತ್ತಮ ಹೂ.ಬ. ಚಾಮರಾಜನಗರ, Ph: 09481189116

ಮೂರ್ತಿಗಳ ರಕ್ಷಣೆಗೆ ಮಾಯಾವತಿ ಸರ್ಕಾರದಿಂದ 6,000 ಕೋಟಿ ರೂ!


ಮೂರ್ತಿಗಳ ರಕ್ಷಣೆಗೆ ಮಾಯಾವತಿ ಸರ್ಕಾರದಿಂದ 6,000 ಕೋಟಿ ರೂ!  
ಲಕ್ನೋ, ಮಂಗಳವಾರ, 25 ಮೇ 2010( 17:52 IST )

<!–

–>

PTI

ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅಂದು ಕಾಲ್ತುಳಿತಕ್ಕೆ ಸಿಕ್ಕು ಬಲಿಯಾದವರಿಗೆ ಪರಿಹಾರ ನೀಡಲು ತನ್ನ ಸರ್ಕಾರದ ಬಳಿ ಹಣವಿಲ್ಲ ಎಂದು ಗೋಳಾಡಿದ್ದರೂ, ರಾಜ್ಯದ ಉದ್ದಗಲಕ್ಕೂ ಸ್ಫಾಪಿಸಿದ ಮೂರ್ತಿಗಳನ್ನು ಸಂರಕ್ಷಿಸಲು ಮಾತ್ರ ಹಣವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ! ಮೂರ್ತಿಗಳು ಹಾಗೂ ಸ್ಮಾರಕಗಳ ಸಂರಕ್ಷಣೆಗಾಗಿ ವಿಶೇಷ ರಕ್ಷಣಾ ಪಡೆಯನ್ನು ನಿಯೋಜಿಸಲು ಚಿಂತಿಸಿದ್ದ ಮಾಯಾವತಿ ಇದೀಗ ಅದಕ್ಕೆ ಮುಂದಡಿಯಿಟ್ಟಿದ್ದಾರೆ.

ಮುಂದಿನ ತಿಂಗಳಲ್ಲಿ ಹೊಸ ರಕ್ಷಣಾ ಪಡೆಯೊಂದರ ಆಯ್ಕೆ ನಡೆಯಲಿದ್ದು, ಆಯ್ಕೆ ಪ್ರಕ್ರಿಯೆ ಈಗ್ಗೆ ಕೆಲವು ತಿಂಗಳ ಹಿಂದೆ ಆರಂಭವಾಗಿದ್ದು, ಮಾಜಿ ಸೈನಿಕರು ಹಾಗೂ ಸ್ಥಳೀಯ ಮಾಜಿ ರಕ್ಷಣಾ ಸಿಬ್ಬಂದಿಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಿದ್ದೇವೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಕರಮ್‌ವೀರ್ ಸಿಂಗ್ ಹೇಳಿದ್ದಾರೆ.

ಈ ವಿಶೇಷ ದಳ ನಿಯೋಜನೆಗಾಗಿ ಸರ್ಕಾರಕ್ಕೆ ತಗಲುವ ವೆಚ್ಚ ಸುಮಾರು 6,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಈ ಯೋಜನೆಯ ಪ್ರಕಾರ 1000 ಮಂದಿಯಿರುವ ವಿಶೇಷ ರಕ್ಷಣಾ ಪಡೆ ಇದಾಗಿದ್ದು, ಇದಕ್ಕೆ ಪ್ರತ್ಯೇಕವಾದ ಇನ್ಸ್‌ಪೆಕ್ಟರ್ ಜನರಲ್, ವಿಶೇಷ ಅಧಿಕಾರಿ ಹಾಗೂ ಡೆಪ್ಯೂಟಿ ಸೂಪರಿಂಟೆಂಡೆಂಟ್‌ಗಳೂ ಇರಲಿದ್ದಾರೆ.

ಲಕ್ನೋ ಹಾಗೂ ನೊಯ್ಡಾದಲ್ಲಿರುವ ಅಂಬೇಡ್ಕರ್ ಸ್ಮಾರಕ, ಕಾನ್ಶಿರಾಮ್ ಸ್ಮಾರಕ, ಕಾನ್ಶಿರಾಮ್ ಸಾಂಸ್ಕೃತಿಕ ಸ್ಥಳ, ರಾಮ ಬಾಯಿ ಅಂಬೇಡ್ಕರ್ ಮೈದಾನ, ಬುದ್ಧ ವಿಹಾರ ಹಾಗೂ ಕಾನ್ಶಿರಾಮ್ ಇಕೋ ಗಾರ್ಡನ್ ಕೂಡಾ ಈ ರಕ್ಷಮಾ ವ್ಯವಸ್ಥೆಯನ್ನು ಪಡೆಯಲಿರುವ ಪ್ರಮುಖ ಸ್ಥಳಗಳು.

ಆದರೆ ಮೂಲಗಳ ಪ್ರಕಾರ, ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆ ಸಂಬಂಧ ಕ್ಯಾತೆ ತೆಗೆದಿದ್ದು, ಇದೂ ಕಾನೂನು ಸಮ್ಮತವಲ್ಲ ಎಂದು ಪತ್ರ ಬರೆಯಲಿದೆ ಎನ್ನಲಾಗಿದೆ. ರಾಜಭವನ ಈ ಬಗ್ಗೆ ಮಾತೆತ್ತದೆ ಕುಳಿತಿದ್ದರೂ, ಈ ಯೋಜನೆ ಸಂಬಂಧ ತನ್ನ ಸಹಮತ ಹೊಂದಿಲ್ಲ ಎನ್ನಲಾಗುತ್ತಿದೆ.

ಕಾಂಗ್ರೆಸ್, ಬಿಜೆಪಿ ಅಂಬೇಡ್ಕರ್ ವಿರೋಧಿಗಳು: ಮಾಯಾವತಿ


ಕಾಂಗ್ರೆಸ್, ಬಿಜೆಪಿ ಅಂಬೇಡ್ಕರ್ ವಿರೋಧಿಗಳು: ಮಾಯಾವತಿ  
ಲಕ್ನೋ, ಶನಿವಾರ, 27 ಮಾರ್ಚ್ 2010( 20:32 IST )

<!–

–>ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಶನಿವಾರ ಗಂಭೀರವಾಗಿ ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಜಾರಿ ನಿರ್ಧಾರ ಕುರಿತಂತೆ ಮತ್ತೆ ವಾಗ್ದಾಳಿ ನಡೆಸಿರುವ ಅವರು, ಮಹಿಳಾ ಮೀಸಲಾತಿ ಮಸೂದೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ಬಡ ಮಹಿಳೆಯರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಆರೋಪಿಸಿದ್ದಾರೆ.

ಬಿಎಸ್ಪಿ ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನೀತಿ ಮತ್ತು ನಡವಳಿಕೆಗಳನ್ನು ಗಮನಿಸಿದರೆ ಇವರೆಲ್ಲಾ ಯಾವಾಗಲೂ ಅಂಬೇಡ್ಕರ್ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಗೌರವಾರ್ಥವಾಗಿ ಬೃಹತ್ ಸೌಧ, ಪಾರ್ಕ್, ಯೂನಿರ್ವಸಿಟಿಗಳನ್ನು ನಿರ್ಮಿಸಲು ಮುಂದಾದ ಸಂದರ್ಭದಲ್ಲಿಯೇ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನುಳಿದ ವಿರೋಧ ಪಕ್ಷಗಳು ಅನಾವಶ್ಯಕ ವಿವಾದ ಹುಟ್ಟುಹಾಕಲು ಪ್ರಾರಂಭಿಸಿರುವುದಾಗಿ ಹೇಳಿದರು.

ಬಿಜೆಪಿ ಸರ್ಕಾರ ಹೇಳಿದ ಹಾಗೆ ಕೇಳಲು ಆಗಲ್ಲ: ದ್ವಾರಕನಾಥ್


ಕೋಲಾರ, ಗುರುವಾರ, 29 ಏಪ್ರಿಲ್ 2010( 17:51 IST )

ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ ಎಂದ ಮಾತ್ರಕ್ಕೆ ಅವರು ಹೇಳಿದ ಹಾಗೆ ಮಾಡಬೇಕೆಂಬ ನಿಯಮವೇನೂ ಇಲ್ಲ. ಅನ್ಯಾಯ ಕಂಡು ಬಂದಾಗ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಹೀಗೆಂದವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್.

ವೀರಶೈವ ಲಿಂಗಾಯಿತ ಸಾದರ ಜನಾಂಗವನ್ನು ಪ್ರವರ್ಗ 2ಎಗೆ ಸೇರಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ದ್ವಾರಕನಾಥ್ ಅವರ ಅಭಿಪ್ರಾಯ ಹಾಗೂ ಸ್ಪಷ್ಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಈ ಗೊಂದಲಕ್ಕೆ ಆಯೋಗದ ಅಧ್ಯಕ್ಷರೂ ಕಾರಣವೆಂಬುದಕ್ಕೆ ದ್ವಾರಕನಾಥ್ ಈ ಹೇಳಿಕೆ ನೀಡಿದ್ದಾರೆ.

ನಾನು ಯಾರ ವಿರೋಧಿಯಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾದ ಮೇಲೆ ಯಾವುದೇ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ. ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸಿದ್ದೇನೆ. ಸರ್ಕಾರದ ಗೊಂದಲದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗದಿರಲಿ ಎಂಬ ಕಾರಣಕ್ಕಾಗಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ದೇನೆ. ಇದನ್ನೇ ವಿರೋಧಿ ನೀತಿ ಎಂದು ಭಾವಿಸಿದ್ದಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಪ್ಪು ಮಾಡಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಮುಖ್ಯಮಂತ್ರಿಗಳು ಹಿಂದುಳಿದ ವರ್ಗದ ಮೇಲಿರುವ ಕಾಳಜಿಯನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಬಹುದಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗದ ಅಧ್ಯಕ್ಷನಾಗಿ ನಾನು ಮುಂದುವರಿಯುತ್ತಿರುವುದೇ ಮುಖ್ಯಮಂತ್ರಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಹಾಗಿರುವಾಗ ಭೇಟಿ ಹೇಗೆ ಸಾಧ್ಯ ಎಂದು ಮರುಪ್ರಶ್ನಿಸಿದರು.

Conspiracy of govt to stop Caste-based Census


“eÛ~ VÚy~ }Úsæ¾ÚßÄß ÑÚOÛ%ÁÚ¥Ú ¯}ÚàÂ’

¥ÚÆ}Ú ÑÚMYÚÎÚ% ÑÚÉß~ ÈÚ~¿ßM¥Ú OÚäÎÚ|®Ú°«ÚÈÚÁÚ d«Ú½¦«ÚÈÚ«Úß„ ÕM¥ÚßØ¥Ú A¾æàÞVÚ¥Ú @¨Ú´ÀOÚÐ Ò.GÑé. ¥Û‡ÁÚOÚ«Û¢Ú D¥Û[nÒ¥ÚÁÚß. ÈÚáÛf ÑÚ_ÈÚ ¸.Oæ. ^ÚM¥ÚÃËæÞRÁé ÑÚMYÚ¥Ú @¨Ú´ÀOÚÐ ÈÚáÛÈÚØÙ ËÚMOÚÁé ÔÛdÂ¥Ú§ÁÚß.

†æMVÚ×ÚàÁÚß: eÛ~ VÚy~ }Úsæ¾ÚßÄß ÁÛdÀ ÑÚOÛ%ÁÚ ÈÚÀÈÚÒ¤}Ú ¯}Úà ÈÚáÛsÚß~¡¥æ. B¥Úß @OÚÐÈÚßÀ @®ÚÁÛ¨Ú GM¥Úß OÚ«Û%lOÚ ËÛËÚ‡}Ú ÕM¥ÚßØ¥Ú ÈÚVÚ%VÚ×Ú A¾æàÞVÚ¥Ú @¨Ú´ÀOÚÐ sÛ+Ò.GÑé. ¥Û‡ÁÚOÚ«Û¢é AÁæàÞ¯Ò¥Û§Áæ. ¥ÚÆ}Ú ÑÚMYÚÎÚ% ÑÚÉß~ (@M†æÞsÚQÁé ÈÛ¥Ú) †æMVÚ×ÚàÁÚß «ÚVÚÁÚ ÈÚß}Úß¡ VÛÃÈÚáÛM}ÚÁÚ fÅÛÇ ÑÚÉß~VÚ×Úß «Ûćt OÚäÎÚ|ÁÛd Jsæ¾ÚßÁé ÔÛVÚà ®æãÃ.¸. OÚäÎÚ|®Ú° @ÈÚÁÚ d«Ú½ ¦«Ú¥Ú @MVÚÈÛW ¾ÚßÈÚ¬OÚ ÑÚºÛMVÚy¥ÚÆÇ …ߨÚÈÛÁÚ H®Ú%tÒ¥Ú§ ÑÛÈÚáÛfOÚ ÑÚÈÚáÛ«Ú}æVÛW eÛ~ÈÛÁÚß d«ÚVÚy~ ÈÚß}Úß¡ ÑÚOÛ%ÁÚ¥Ú ÔæàÑÚ ®ÚpÚÀOÚÃÈÚß¥Ú }Û~‡OÚ _M}Ú«æ É^ÛÁÚVæàÞÏr D¥Û[nÒ @ÈÚÁÚß ÈÚáÛ}Ú«Ût¥ÚÁÚß. eÛ~ VÚy~ «ÚsæÑÚÄß A¾æàÞVÚOæQ OæÞM¥Úà ÑÚOÛ%ÁÚÈÚâ´ 21.5 OæàÞn ÁÚß. @«Úß¥Û«Ú ¬Þt¥æ. A¥ÚÁæ, B«Úà„ VÚy~ «Úsæ¦ÄÇ. ÕM¥ÚßØ¥ÚÈÚÁÚß ÉßÞÑÚÅÛ~ OæÞØ¥ÚÁæ ÑÚ߯ÃÞM ÈÚß}Úß¡ ÔæçOæàÞmé%VÚ×Úß ÕM¥ÚßØ¥Ú ÑÚÈÚßߥ۾Úß¥Ú …VæX sÛmÛ OæÞ×Úß~¡Èæ. @¥Ú«Úß„ J¥ÚWÑÚÄß AVÚß~¡ÄÇ GM¥ÚÁÚß. ÑÚMɨ۫ڥÚM}æ ®ÚÃ~ 10 ÈÚÎÚ%OæàQÈæß½ eÛ~ A¨ÛÂ}Ú d«ÚVÚy~ «ÚsæÑÚ†æÞOÚß. A¥ÚÁæ, OÚ×æ¥Ú 70 ÈÚÎÚ%VÚØM¥Ú eÛ~ÈÛÁÚß VÚy~ «Úsæ¦ÄÇ. ¸eæ¯ ÑÚOÛ%ÁÚ …M¥Ú ÈæßÞÅæ A¾æàÞVÚOæQ }æàM¥ÚÁæ AW¥æ. OÚ×æ¥Ú 2 ÈÚÎÚ%VÚ×ÚÆÇ 8 d«Ú ÑÚ¥ÚÑÚÀ OÛ¾Úß%¥ÚÌ%VÚ×Ú«Úß„ …¥ÚÅÛ¿ßÒ¥Û§Áæ. A¾æàÞVÚOæQ ÈÚßßRÀÈÚßM~ÃVÚ×Úß 25 OæàÞn ÁÚß. @ÄÇ  25 ÁÚß. OÚàsÚ OæànoÄÇ. …ÂÞ ÑÚß×ÚßÙ ÔæÞ×Úß~¡¥Û§Áæ GM¥Úß @ÈÚÁÚß ¥ÚàÂ¥ÚÁÚß. OÚ«Û%lOÚ¥ÚÆÇ eÛ~ VÚy~ «ÚsæÑÚ¦¥Ú§Áæ ¾ÚáÛÈÛVÚ †æÞOÛ¥ÚÁÚà OæÞM¥Úà ¬ÞsÚßÈÚ @«Úß¥Û«Ú ÈÛ®ÚÑé ®Úsæ¾Úß…ÔÚߥÚß GM¥Úß @ÈÚÁÚß ~ØÒ¥ÚÁÚß. ÈÚáÛf ÑÚ_ÈÚ ®æãÃ.¸.Oæ. ^ÚM¥ÚÃËæÞRÁé, «Úl ®æãÃ.f.Oæ. VæàÞÉM¥ÚÁÛÈé, @ÕM¥Ú ÈÚßßRMsÚ ®æãÃ.G«é.É. «ÚÁÚÒMÔÚ¾ÚßÀ, D®Ú«ÛÀÑÚOÚ sÛ.Oæ. OÚäÎÚ|®Ú° B¥Ú§ÁÚß.