Archive for the ‘ಕನ್ನಡ ಸುದ್ದಿ’ Category
22 Sep
ಪೂನಾ ಒಪ್ಪಂದ- ಸತ್ಯ ಎಲ್ಲೆಡೆಗೆ
18 Aug
ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?
ರಾಹುಲ್ ಗಾಂಧಿಯವರು ಸಂವಾದಗಳಿಂದ ಸಾಧಿಸುವುದೇನು?
ಶ್ರೀಮಂತರಿಗೆ, ಅದು ಹೆಚ್ಚು ಓದಿಕೊಂಡ ಬಡತನದ ಗಂಧವೇ ಇಲ್ಲದ, ಶೋಷಿತರ ಕಷ್ಟಗಳ ಅರಿವೆ ಇಲ್ಲದ ಶ್ರೀಮಂತರಿಗೆ ಒಂದು ಖಯಾಲಿ ಇದೆ. ಅದೇನಪ್ಪಾ ಅಂದರೆ ಬಡವರ ಮನೆಗಳಿಗೆ ಭೇಟಿ ನೀಡುವುದು, ಅವರ ಬಡತನವನ್ನು ಹೀನ ಪರಿಸ್ಥಿತಿಯನ್ನು ಕಂಡು ಮರುಗುವುದು , ಅಚ್ಚರಿವ್ಯಕ್ತಪಡಿಸುವುದು, ಸಾಧ್ಯ ವಾದರೆ ಅವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ತಾವೇ ತರುವ ಕ್ಯಾಮೆರಾಗಳಿಗೆ ಅವರ ಜೊತೆ ಫೋಸು ಕೊಡುವುದು! ಅಂದಹಾಗೆ ಇವೆಲ್ಲವನ್ನು ಅವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ , ಸಹಾಯ ಮಾಡಬೇಕೆಂಬ ಹಂಬಲದಿಂದ ಮಾಡುತ್ತಾರೆಂದರೆ ಅದು ತಮಾಷೆಯಾಗುತ್ತದೆ! ಅದು ಮಾಡುವುದು ಕೂಡ ಅವರ ವಯಕ್ತಿಕ ಲಾಭಕ್ಕೆ. ಆ ಬಡವರ ಬಡತನದ ಬಗ್ಗೆ ಅವರ ಸ್ಥಿತಿಗತಿಯ ಬಗ್ಗೆ ಲೇಖನ ಬರೆಯುವುದು, ಕತೆ ಕಾದಂಬರಿಗಳನ್ನು ಬರೆಯುವುದು , ಅದನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದು , ಡಾಕ್ಯೂಮೆಂಟರಿಗಳನ್ನು ತೆಗೆಯುವುದು, ಪ್ರಗತಿಪರ ಚಿಂತಕ ಎನಿಸಿಕೊಳ್ಳುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು. ಸಾಧ್ಯವಾದರೆ ಆ ಬಡವರ ಸಮಸ್ಯೇಗಳ ಬಗ್ಗೆ ಸಂಶೋಧನೆಗಳನ್ನು ಮಾಡಿ ಪಿ,ಹೆಚ್.ಡಿ. ಪದವಿ ಪಡೆಯುವುದು. ಒಟ್ಟಿನಲಿ ಬಡವರ ಬಡತನ ,ಶೋಷಿತರ ಕಷ್ಟಸುಖ ಇವರಿಗೆ ಬಂಡವಾಳ! ಪ್ರಸ್ತುತ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿಯವರು ದೇಶದಾಂದ್ಯಂತ ನಡೆಸುತ್ತಿರುವ ಸಂವಾದ , ವಾಸ್ತವ್ಯ ಇತ್ಯಾದಿ ಕಾರ್ಯಕ್ರಮಗಳು ಕೂಡ ಇಂತಹದ್ದೆ ಮಾದರಿಯವು! ಇದರಿಂದ ರಾಹುಲ್ ಗಾಂಧಿಯವರಿಗೆ ಆಗುವ ಲಾಭ ? ಉತ್ತರ ಸೂರ್ಯಸ್ಪಷ್ಟ. ರಾಜಕೀಯದ್ದು! ಸಣ್ಣ ಪುಟ್ಟ ಶ್ರೀಮಂತರು ಒಂದೆರಡು ಪ್ರಶಸ್ತಿ ಪದವಿ, ಖ್ಯಾತಿಗಳಿಗೆ ತೃಪ್ತಿ ಪಟ್ಟರೆ ರಾಹುಲ್ ಏನಿದ್ದರು ದೊಡ್ಡ ಮಿಕಕ್ಕೇ ಬಲೆ ಬೀಸುತ್ತಿದ್ದಾರೆ. ಆ ಮಿಕ ಈ ದೇಶದ ಪ್ರಧಾನಿ ಪಟ್ಟ. (ಅದು ಅವರಿಗೆ ಅನಾಯಾಸವಾಗಿ ದೊರಕುತ್ತದೆ ಎಬುಂದು ಬೇರೆ ಮಾತು ,ಆದರೂ ಒಂದಷ್ಟು ಇಮೇಜ್ ಬೇಕಲ್ಲ!) ಹಾಗಿದ್ದರೆ ಇಂತಹ ಸ್ವಾರ್ಥ ಉದ್ದೇಶಿತ ಸಂವಾದಗಳಿಂದ ರಾಹುಲ್ರವರು ಸಾಧಿಸುವುದು, ಈ ದೇಶದ ಜನತೆಗೆ ದೊರಕುವ ಲಾಭ? ಅಕ್ಷರಶಃ ಸೊನ್ನೆ! ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಚಚರ್ೆ, ಸಂವಾದ ನಡೆಯಬೇಕಾದ್ದು ಪಾಲರ್ಿಮೆಂಟ್ನಲ್ಲಿ. ಬೀದಿಯಲ್ಲಲ್ಲ. ಪಾಲರ್ಿಮೆಂಟ್ನಲ್ಲಿ ನಡೆದ ಆ ಸಂವಾದಗಳು ಕಾನೂನುಗಳಾಗುತ್ತವೆ . ಅಂತಹ ಕಾನೂನುಗಳು ಈ ದೇಶದ ಬಡವರಿಗೆ ಸಾಮಾಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿಕೊಡುತ್ತವೆ . ಬೀದಿ ಚಚರ್ೆಗಳು , ಸಂವಾದಗಳು ಬತರೀ ಸುದ್ದಿಗಳಾಗಿಯೇ ಉಳಿಯುತ್ತವೆ. ಆ ಸುದ್ದಿಗಳಿಂದ ಸುದ್ದಿಮಾಡಿದವ ನಾಯಕನಾಗಿಯೋ, ಮತ್ತೊಂದಾಗಿಯೋ ಹೊರಹೊಮ್ಮುತ್ತಾನೆ. ಆದರೆ ಆ ಸುದ್ದಿಯ ಮೂಲವಾಗಿರುವ ಬಡವ, ಮತ್ತಾತನ ಸಮಸ್ಯೆಗಳು? ಸಮಸ್ಯೆಗಳಾಗಿಯೇ ಉಳೀಯುತ್ತವೆ! ನಿಜಕ್ಕೂ ರಾಹುಲ್ರ ಈ ತಂತ್ರ ಮೆಚ್ಚಬೇಕಾದ್ದೆ. ಉದಾಹರಣೆಗೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟಕ್ಕೆ ಗಿರಿಜನರ ಜೊತೆ ಸಂವಾದಕ್ಕೆ ಬಂದಿದ್ದ ರಾಹುಲ್ ಗಾಂಧಿಯವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಾದದಲ್ಲಿ ಭಾಗವಹಿಸಿದ್ದ ಗಿರಿಜನರಿಗೇನು ಸಿಕ್ಕಿತು? ಅವರಿನ್ನು ಗಿರಿಜನರಾಗಿಯೇ ಉಳಿದಿದ್ದಾರೆ. ಅವರ ಮುರುಕಲು ಮನೆಗಳು ಹರುಕಲು ಬಟ್ಟೆಗಳು ಹಾಗೆಯೇ ಇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲ , ಸಾಲದ್ದಕ್ಕೆ ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವರನ್ನು ಕಿತ್ತು ತಿನ್ನುತ್ತಿವೆ ಅಧಿಕಾರಿಗಳ ರೂಪದಲ್ಲಿ! ಈ ಭಾರತಕ್ಕೆ ರಾಹುಲ್ ದೆಹಲಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಯಾಕೆ ಬರಬೇಕಿತ್ತು? ದೂರದ ದೆಹಲಿಯಲ್ಲೇ ಕುಳಿತು ಗಿರಿಜನರ ಪರ ಅಂದರೆ ಅವರ ಅರಣ್ಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಾರುಕಟ್ಟೆ ನಿಮರ್ಿಸುವಂತಹ , ಅರಣ್ಯಗಳಿಂದ ಅವರನ್ನು ಒಕ್ಕಲೆಬ್ಬಿಸದಿರುವಂತಹ ಕಾನೂನುಗಳನ್ನು ಮಾಡ ಬಹುದಿತ್ತಲ್ಲ! ರಾಹುಲ್ಜೀಯವರಿಗೆ ಇದು ಗೊತ್ತಿರಲಿಲ್ಲವೆ? ಗೊತ್ತು. ಆದರೆ ಅಂತಹ ಕಾನೂನು ಕ್ರಮಗಳು ಓಟ್ ಬ್ಯಾಂಕ್ ಸೃಷ್ಟಿಸುವ ಸಾಧ್ಯತೆ ಕಡಿಮೆ ಇರುತ್ತದಲ್ಲ! ಸಾಲದಕ್ಕೆ ಅದು ಕಠಿಣತಮ ಪ್ರಕ್ರಿಯೆ ಬೇರೆ. ಅದೇ ಬೀದಿಯಲಿ ನಿಂತು( ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಪೂರ್ವ ನಿರ್ಧರಿತವಾಗಿ!) ಸಂವಾದ ನಡೆಸುವುದು? ಸುಲಭ. ಜೊತೆಗೆ ಪ್ರಚಾರಾನೂ ಸಿಗುತ್ತೆ! ಓಟ್ ಬ್ಯಾಂಕೂ ಹೆಚ್ಚುತ್ತೆ. ಪ್ರಧಾನಿ ಪಟ್ಟಕ್ಕೆ ಬೇಕಾದ ಅರ್ಹತೆಗಳಂತೂ ಅನಾಯಾಸವಾಗಿ ಒದಗಿ ಬಂದೇಬರುತ್ತೆ! ನಿಜ, ಕಾಂಗ್ರೆಸ್ಸಿನ ಯುವರಾಜನಾಗಿ, ಪ್ರಭಾವಿ ಸಂಸದನಾಗಿ ಇಂದು ರಾಹುಲ್ ಏನನ್ನು ಬೇಕಾದರೂ ಸಾಧಿಸಬಹುದು. ರಾಷ್ಟ್ರದ ಗತಿಯನ್ನೇ ಬದಲಿಸ ಬಹುದು . ಅಂತಹದ್ಯಾವುದ್ದಕ್ಕೂ ಇವರಿಗೆ ಮನಸ್ಸಿದ್ದಂತಿಲ್ಲ. ಏಕೆಂದರೆ ಈ ದೇಶದ ಗತಿಯನ್ನು ಬದಲಿಸುವುದೆಂದರೆ, ಈ ದೇಶದ ಬಡವರ ಸ್ಥಿತಿಗತಿ ಬದಲಿಸುವುದೆಂದರ್ಥ. ಶೋಷಿತರ ಸಮಸ್ಯೆಗಳನ್ನು ನಿವಾರಿಸುವುದೆಂದರ್ಥ.ರಾಹುಲ್ ಗಾಂಧಿಯವರಿಗೆ ಇದ್ಯಾವುದು ಬೇಕಿಲ್ಲ ಎಂದೆನಿಸುತ್ತದೆ. ಅದಕ್ಕೆ ಅವರು ಬೀದಿ ಸಂವಾದಗಳಿಗೆ ಜೋತು ಬಿದ್ದಿದ್ದಾರೆ, ಪಾಲರ್ಿಮೆಂಟಿನಲ್ಲಿ ನಡೆಸಬೇಕಾದ ಸಂವಾದಗಳನ್ನು ಬಿಟ್ಟು. ನಿಜವಾಗಿ ಹೇಳಬೇಕೆಂದರೆ ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಸಮಸ್ಯೆಗಳು ಇಂದು ದೇಶವನ್ನು ಕಿತ್ತು ತಿನ್ನುತ್ತಿವೆ . ಜಾತಿ ಆಧರಿತ ಜನಗಣತಿಯ ಬಗ್ಗೆ ಕೇಂದ್ರ ಸಕರ್ಾರ ಮೀನಾಮೇಷ ಎಣಿಸುತ್ತಿದೆ,. ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವಂತಹ ರಂಗನಾಥ ಮಿಶ್ರ ವರದಿ ಹಾಗೆ ಕೊಳೆಯುತ್ತಿದೆ. ದಿಲ್ಲಿಯ ಅವರ ಪಕ್ಷದ ನೇತೃತ್ವದ ಸಕರ್ಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದಲಿತರ ಹಣ ಬಳಸಿಕೊಂಡ ಆರೋಪ ಬೇರೆ ಕೇಳಿ ಬರುತ್ತಿದೆ. ನೈಜವಾದ ಕಳಕಳಿಯಿದ್ದರೆ ರಾಹುಲ್ ಗಾಂಧಿಯವರು ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ದನಿ ಎತ್ತ ಬೇಕಿತ್ತು , ಬಡವರ ಪರ ಶೋಷಿತರ ಪರ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ, ವೀರಾವೇಶದಿಂದ ಹೋರಾಡಬೇಕಿತ್ತು. ಆಗ ಇವರು ನಿಜವಾದ ಜನಪರ ನಾಯಕ, ಕಾಳಜಿಯುಳ್ಳ ರಾಜಕಾರಣಿ ಎಂದೆನಿಸಿಕೊಳ್ಳುತ್ತಿದ್ದರು ಮತ್ತು ಬೀದಿಯಲಿ ಅವರು ನಡೆಸುವ ಸಂವಾದಗಳಿಗೂ ಆಗ ಬೆಲೆ ಇರುತ್ತಿತ್ತು. ಅದು ಬಿಟ್ಟು ಯುವಜನರ ಜೊತೆ ಸಂವಾದ, ವಿಧ್ಯಾಥರ್ಿಗಳ ಜೊತೆ ಬೆರೆಯಯುವುದು , ಕ್ಯಾಂಟೀನ್ಗಳಲ್ಲಿ ಕಾಫಿ ತಿಂಡಿ ತಿನ್ನುವುದು, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಢೋಂಗಿತನದ ಪ್ರದರ್ಶನವಲ್ಲದೆ ಮತ್ತೇನು? ವಯಕ್ತಿಕ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕು . ಅದು 1986 ರ ಒಂದು ದಿನ. ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವದು. ಆ ಸಂಧರ್ಭ ರಾಜೀವ್ಗಾಂಧಿಯವರು ನಮ್ಮೂರಿಗೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್ ಮೂಲಕ ಬಂದ ಅವರು ಸ್ಟೇಜ್ ಮೇಲೆ ಏರುತ್ತಿದ್ದಂತೆ ಅವರನ್ನು ನೋಡಲು ಕಷ್ಟಪಡುತ್ತಿದ್ದ ನನ್ನನ್ನು ನಮ್ಮಪ್ಪ ಹೆಗಲ ಮೇಲೆ ಎತ್ತಿಕೊಂಡು ತೋರಿಸಿ ಎಷ್ಟು ಕೆಂಪಗವರೆ ಅಲ್ವಾ ಎಂದಿದ್ದರು. ನಾನು ಹ್ಞೂ, ಅಪ್ಪೈ ಎಂದಿದ್ದೆ. ಅದಾದ ನಂತರ ನನಗೆ ಬುದ್ಧಿ ಬಂದ ಕಾಲದಿಂದಲೂ ರಾಜೀವ್ ಶೋಷಿತರ ಪರ ಕೆಲಸ ಮಾಡಿದ ಒಂದೂ ಸುದ್ದಿಯನ್ನೂ ಓದಲಿಲ್ಲ. ಆದರೆ ಅದೇ ಶತಮಾನಗಳಿಂದ ಗಿಡಗಂಟಿಗಳು ಬೆಳೆದಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯ ಬೀಗವನ್ನು ರಾಜೀವ್ ತೆಗೆಸಿದ ಸುದ್ಧಿಯನ್ನು ಓದಿದೆ! ಮುಂದೆ ಅದರಿಂದಾಶದ ಅನಾಹುತ ಇಡೀ ಜಗತ್ತಿಗೇ ತಿಳಿದಿದೆ. ರಾಹುಲ್ ಕೂಡ ತಮ್ಮ ತಂದೆಯ ಹಾಶಗೆ ಕೆಂಪಗೆ ಇದ್ದಾರೆ. ಮುಂದೆ ಅವರೂ ಕೂಡ ಪ್ರಧಾನಿಯಾಗಲಿದ್ದಾರೆ. ಆದರೆ ಆಶಯವೆಂದರೆ ರಾಹುಲ್ ಗಾಂಧಿಯವರು ತಮ್ಮ ತಂದೆಯವರು ಮಾಡಿದ ತಪ್ಪುಗಳನ್ನು ಪುನರಾವತರ್ಿಸುವುದು ಬೇಡ. ಅದಕ್ಕಾಗಿ ರಾಹುಲ್ಜೀಯವರು ಇಂತಹ ಸಂವಾದಗಳನ್ನು ನಡೆಸುವುದು ಬಿಟ್ಟು ತಮ್ಮ ತಂದೆಯ , ತಮ್ಮ ಅಜ್ಜಿ ಇಂದಿರಾಗಾಂಧಿಯವರ, ಮುತ್ತಾತ ಪಂಡಿತ್ ನೆಹರೂರವರ ಆಡಳಿತಾವಧಿಯನ್ನು ಕೂಲಂಕುಷವಾಗಿ ಅಧ್ಯಯನಮಾಡಲಿ. ತಪ್ಪುಒಪ್ಪುಗಳನ್ನು ಪರಿಶೀಲಿಸಲಿ .ಅದಕ್ಕೂ ಮೊದಲು ಸಂಸತ್ತಿನಲ್ಲಿ ಬಡವರ ಪರ, ಶೋಷಿತರ ಪರ ದನಿ ಎತ್ತಲಿ. ರಘೋತ್ತಮ ಹೊ. ಬ ಚಾನಮರಾಜನಗರ – ಮೊ; 9481189116
ಶ್ರೀಮಂತರಿಗೆ, ಅದು ಹೆಚ್ಚು ಓದಿಕೊಂಡ ಬಡತನದ ಗಂಧವೇ ಇಲ್ಲದ, ಶೋಷಿತರ ಕಷ್ಟಗಳ ಅರಿವೆ ಇಲ್ಲದ ಶ್ರೀಮಂತರಿಗೆ ಒಂದು ಖಯಾಲಿ ಇದೆ. ಅದೇನಪ್ಪಾ ಅಂದರೆ ಬಡವರ ಮನೆಗಳಿಗೆ ಭೇಟಿ ನೀಡುವುದು, ಅವರ ಬಡತನವನ್ನು ಹೀನ ಪರಿಸ್ಥಿತಿಯನ್ನು ಕಂಡು ಮರುಗುವುದು , ಅಚ್ಚರಿವ್ಯಕ್ತಪಡಿಸುವುದು, ಸಾಧ್ಯ ವಾದರೆ ಅವರಿಗೆ ನೂರಿನ್ನೂರು ರೂಪಾಯಿ ಕೊಟ್ಟು ತಾವೇ ತರುವ ಕ್ಯಾಮೆರಾಗಳಿಗೆ ಅವರ ಜೊತೆ ಫೋಸು ಕೊಡುವುದು! ಅಂದಹಾಗೆ ಇವೆಲ್ಲವನ್ನು ಅವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ , ಸಹಾಯ ಮಾಡಬೇಕೆಂಬ ಹಂಬಲದಿಂದ ಮಾಡುತ್ತಾರೆಂದರೆ ಅದು ತಮಾಷೆಯಾಗುತ್ತದೆ! ಅದು ಮಾಡುವುದು ಕೂಡ ಅವರ ವಯಕ್ತಿಕ ಲಾಭಕ್ಕೆ. ಆ ಬಡವರ ಬಡತನದ ಬಗ್ಗೆ ಅವರ ಸ್ಥಿತಿಗತಿಯ ಬಗ್ಗೆ ಲೇಖನ ಬರೆಯುವುದು, ಕತೆ ಕಾದಂಬರಿಗಳನ್ನು ಬರೆಯುವುದು , ಅದನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುವುದು , ಡಾಕ್ಯೂಮೆಂಟರಿಗಳನ್ನು ತೆಗೆಯುವುದು, ಪ್ರಗತಿಪರ ಚಿಂತಕ ಎನಿಸಿಕೊಳ್ಳುವುದು, ಪ್ರಶಸ್ತಿಗಳನ್ನು ಬಾಚಿಕೊಳ್ಳುವುದು. ಸಾಧ್ಯವಾದರೆ ಆ ಬಡವರ ಸಮಸ್ಯೇಗಳ ಬಗ್ಗೆ ಸಂಶೋಧನೆಗಳನ್ನು ಮಾಡಿ ಪಿ,ಹೆಚ್.ಡಿ. ಪದವಿ ಪಡೆಯುವುದು. ಒಟ್ಟಿನಲಿ ಬಡವರ ಬಡತನ ,ಶೋಷಿತರ ಕಷ್ಟಸುಖ ಇವರಿಗೆ ಬಂಡವಾಳ!ಪ್ರಸ್ತುತ ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿಯವರು ದೇಶದಾಂದ್ಯಂತ ನಡೆಸುತ್ತಿರುವ ಸಂವಾದ , ವಾಸ್ತವ್ಯ ಇತ್ಯಾದಿ ಕಾರ್ಯಕ್ರಮಗಳು ಕೂಡ ಇಂತಹದ್ದೆ ಮಾದರಿಯವು! ಇದರಿಂದ ರಾಹುಲ್ ಗಾಂಧಿಯವರಿಗೆ ಆಗುವ ಲಾಭ ? ಉತ್ತರ ಸೂರ್ಯಸ್ಪಷ್ಟ. ರಾಜಕೀಯದ್ದು!ಸಣ್ಣ ಪುಟ್ಟ ಶ್ರೀಮಂತರು ಒಂದೆರಡು ಪ್ರಶಸ್ತಿ ಪದವಿ, ಖ್ಯಾತಿಗಳಿಗೆ ತೃಪ್ತಿ ಪಟ್ಟರೆ ರಾಹುಲ್ ಏನಿದ್ದರು ದೊಡ್ಡ ಮಿಕಕ್ಕೇ ಬಲೆ ಬೀಸುತ್ತಿದ್ದಾರೆ. ಆ ಮಿಕ ಈ ದೇಶದ ಪ್ರಧಾನಿ ಪಟ್ಟ. (ಅದು ಅವರಿಗೆ ಅನಾಯಾಸವಾಗಿ ದೊರಕುತ್ತದೆ ಎಬುಂದು ಬೇರೆ ಮಾತು ,ಆದರೂ ಒಂದಷ್ಟು ಇಮೇಜ್ ಬೇಕಲ್ಲ!)ಹಾಗಿದ್ದರೆ ಇಂತಹ ಸ್ವಾರ್ಥ ಉದ್ದೇಶಿತ ಸಂವಾದಗಳಿಂದ ರಾಹುಲ್ರವರು ಸಾಧಿಸುವುದು, ಈ ದೇಶದ ಜನತೆಗೆ ದೊರಕುವ ಲಾಭ? ಅಕ್ಷರಶಃ ಸೊನ್ನೆ! ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಚಚರ್ೆ, ಸಂವಾದ ನಡೆಯಬೇಕಾದ್ದು ಪಾಲರ್ಿಮೆಂಟ್ನಲ್ಲಿ. ಬೀದಿಯಲ್ಲಲ್ಲ. ಪಾಲರ್ಿಮೆಂಟ್ನಲ್ಲಿ ನಡೆದ ಆ ಸಂವಾದಗಳು ಕಾನೂನುಗಳಾಗುತ್ತವೆ . ಅಂತಹ ಕಾನೂನುಗಳು ಈ ದೇಶದ ಬಡವರಿಗೆ ಸಾಮಾಜಿಕ ನ್ಯಾಯ, ಸಮಾನತೆಯನ್ನು ದೊರಕಿಸಿಕೊಡುತ್ತವೆ . ಬೀದಿ ಚಚರ್ೆಗಳು , ಸಂವಾದಗಳು ಬತರೀ ಸುದ್ದಿಗಳಾಗಿಯೇ ಉಳಿಯುತ್ತವೆ. ಆ ಸುದ್ದಿಗಳಿಂದ ಸುದ್ದಿಮಾಡಿದವ ನಾಯಕನಾಗಿಯೋ, ಮತ್ತೊಂದಾಗಿಯೋ ಹೊರಹೊಮ್ಮುತ್ತಾನೆ. ಆದರೆ ಆ ಸುದ್ದಿಯ ಮೂಲವಾಗಿರುವ ಬಡವ, ಮತ್ತಾತನ ಸಮಸ್ಯೆಗಳು? ಸಮಸ್ಯೆಗಳಾಗಿಯೇ ಉಳೀಯುತ್ತವೆ! ನಿಜಕ್ಕೂ ರಾಹುಲ್ರ ಈ ತಂತ್ರ ಮೆಚ್ಚಬೇಕಾದ್ದೆ.ಉದಾಹರಣೆಗೆ ಕಳೆದ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟಕ್ಕೆ ಗಿರಿಜನರ ಜೊತೆ ಸಂವಾದಕ್ಕೆ ಬಂದಿದ್ದ ರಾಹುಲ್ ಗಾಂಧಿಯವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಾದದಲ್ಲಿ ಭಾಗವಹಿಸಿದ್ದ ಗಿರಿಜನರಿಗೇನು ಸಿಕ್ಕಿತು? ಅವರಿನ್ನು ಗಿರಿಜನರಾಗಿಯೇ ಉಳಿದಿದ್ದಾರೆ. ಅವರ ಮುರುಕಲು ಮನೆಗಳು ಹರುಕಲು ಬಟ್ಟೆಗಳು ಹಾಗೆಯೇ ಇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆಯೂ ಇಲ್ಲ , ಸಾಲದ್ದಕ್ಕೆ ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಅವರನ್ನು ಕಿತ್ತು ತಿನ್ನುತ್ತಿವೆ ಅಧಿಕಾರಿಗಳ ರೂಪದಲ್ಲಿ! ಈ ಭಾರತಕ್ಕೆ ರಾಹುಲ್ ದೆಹಲಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಯಾಕೆ ಬರಬೇಕಿತ್ತು? ದೂರದ ದೆಹಲಿಯಲ್ಲೇ ಕುಳಿತು ಗಿರಿಜನರ ಪರ ಅಂದರೆ ಅವರ ಅರಣ್ಯ ಉತ್ಪನ್ನಗಳಿಗೆ ಅಂತರಾಷ್ಟೀಯ ಮಾರುಕಟ್ಟೆ ನಿಮರ್ಿಸುವಂತಹ , ಅರಣ್ಯಗಳಿಂದ ಅವರನ್ನು ಒಕ್ಕಲೆಬ್ಬಿಸದಿರುವಂತಹ ಕಾನೂನುಗಳನ್ನು ಮಾಡ ಬಹುದಿತ್ತಲ್ಲ! ರಾಹುಲ್ಜೀಯವರಿಗೆ ಇದು ಗೊತ್ತಿರಲಿಲ್ಲವೆ? ಗೊತ್ತು. ಆದರೆ ಅಂತಹ ಕಾನೂನು ಕ್ರಮಗಳು ಓಟ್ ಬ್ಯಾಂಕ್ ಸೃಷ್ಟಿಸುವ ಸಾಧ್ಯತೆ ಕಡಿಮೆ ಇರುತ್ತದಲ್ಲ! ಸಾಲದಕ್ಕೆ ಅದು ಕಠಿಣತಮ ಪ್ರಕ್ರಿಯೆ ಬೇರೆ. ಅದೇ ಬೀದಿಯಲಿ ನಿಂತು( ಇಂತಿಂತಹವರಿಗೆ ಇಂತಿಂತಹದೆ ಪ್ರಶ್ನೆಗಳನ್ನು ಕೇಳಿ ಎಂದು ಪೂರ್ವ ನಿರ್ಧರಿತವಾಗಿ!) ಸಂವಾದ ನಡೆಸುವುದು? ಸುಲಭ. ಜೊತೆಗೆ ಪ್ರಚಾರಾನೂ ಸಿಗುತ್ತೆ! ಓಟ್ ಬ್ಯಾಂಕೂ ಹೆಚ್ಚುತ್ತೆ. ಪ್ರಧಾನಿ ಪಟ್ಟಕ್ಕೆ ಬೇಕಾದ ಅರ್ಹತೆಗಳಂತೂ ಅನಾಯಾಸವಾಗಿ ಒದಗಿ ಬಂದೇಬರುತ್ತೆ!ನಿಜ, ಕಾಂಗ್ರೆಸ್ಸಿನ ಯುವರಾಜನಾಗಿ, ಪ್ರಭಾವಿ ಸಂಸದನಾಗಿ ಇಂದು ರಾಹುಲ್ ಏನನ್ನು ಬೇಕಾದರೂ ಸಾಧಿಸಬಹುದು. ರಾಷ್ಟ್ರದ ಗತಿಯನ್ನೇ ಬದಲಿಸ ಬಹುದು . ಅಂತಹದ್ಯಾವುದ್ದಕ್ಕೂ ಇವರಿಗೆ ಮನಸ್ಸಿದ್ದಂತಿಲ್ಲ. ಏಕೆಂದರೆ ಈ ದೇಶದ ಗತಿಯನ್ನು ಬದಲಿಸುವುದೆಂದರೆ, ಈ ದೇಶದ ಬಡವರ ಸ್ಥಿತಿಗತಿ ಬದಲಿಸುವುದೆಂದರ್ಥ. ಶೋಷಿತರ ಸಮಸ್ಯೆಗಳನ್ನು ನಿವಾರಿಸುವುದೆಂದರ್ಥ.ರಾಹುಲ್ ಗಾಂಧಿಯವರಿಗೆ ಇದ್ಯಾವುದು ಬೇಕಿಲ್ಲ ಎಂದೆನಿಸುತ್ತದೆ. ಅದಕ್ಕೆ ಅವರು ಬೀದಿ ಸಂವಾದಗಳಿಗೆ ಜೋತು ಬಿದ್ದಿದ್ದಾರೆ, ಪಾಲರ್ಿಮೆಂಟಿನಲ್ಲಿ ನಡೆಸಬೇಕಾದ ಸಂವಾದಗಳನ್ನು ಬಿಟ್ಟು.ನಿಜವಾಗಿ ಹೇಳಬೇಕೆಂದರೆ ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಸಮಸ್ಯೆಗಳು ಇಂದು ದೇಶವನ್ನು ಕಿತ್ತು ತಿನ್ನುತ್ತಿವೆ . ಜಾತಿ ಆಧರಿತ ಜನಗಣತಿಯ ಬಗ್ಗೆ ಕೇಂದ್ರ ಸಕರ್ಾರ ಮೀನಾಮೇಷ ಎಣಿಸುತ್ತಿದೆ,. ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿಕೊಡುವಂತಹ ರಂಗನಾಥ ಮಿಶ್ರ ವರದಿ ಹಾಗೆ ಕೊಳೆಯುತ್ತಿದೆ. ದಿಲ್ಲಿಯ ಅವರ ಪಕ್ಷದ ನೇತೃತ್ವದ ಸಕರ್ಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ದಲಿತರ ಹಣ ಬಳಸಿಕೊಂಡ ಆರೋಪ ಬೇರೆ ಕೇಳಿ ಬರುತ್ತಿದೆ. ನೈಜವಾದ ಕಳಕಳಿಯಿದ್ದರೆ ರಾಹುಲ್ ಗಾಂಧಿಯವರು ಈ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಗಟ್ಟಿಯಾಗಿ ದನಿ ಎತ್ತ ಬೇಕಿತ್ತು , ಬಡವರ ಪರ ಶೋಷಿತರ ಪರ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ, ವೀರಾವೇಶದಿಂದ ಹೋರಾಡಬೇಕಿತ್ತು. ಆಗ ಇವರು ನಿಜವಾದ ಜನಪರ ನಾಯಕ, ಕಾಳಜಿಯುಳ್ಳ ರಾಜಕಾರಣಿ ಎಂದೆನಿಸಿಕೊಳ್ಳುತ್ತಿದ್ದರು ಮತ್ತು ಬೀದಿಯಲಿ ಅವರು ನಡೆಸುವ ಸಂವಾದಗಳಿಗೂ ಆಗ ಬೆಲೆ ಇರುತ್ತಿತ್ತು. ಅದು ಬಿಟ್ಟು ಯುವಜನರ ಜೊತೆ ಸಂವಾದ, ವಿಧ್ಯಾಥರ್ಿಗಳ ಜೊತೆ ಬೆರೆಯಯುವುದು , ಕ್ಯಾಂಟೀನ್ಗಳಲ್ಲಿ ಕಾಫಿ ತಿಂಡಿ ತಿನ್ನುವುದು, ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಢೋಂಗಿತನದ ಪ್ರದರ್ಶನವಲ್ಲದೆ ಮತ್ತೇನು?ವಯಕ್ತಿಕ ಘಟನೆಯೊಂದನ್ನು ಇಲ್ಲಿ ಹೇಳಲೇಬೇಕು . ಅದು 1986 ರ ಒಂದು ದಿನ. ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವದು. ಆ ಸಂಧರ್ಭ ರಾಜೀವ್ಗಾಂಧಿಯವರು ನಮ್ಮೂರಿಗೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್ ಮೂಲಕ ಬಂದ ಅವರು ಸ್ಟೇಜ್ ಮೇಲೆ ಏರುತ್ತಿದ್ದಂತೆ ಅವರನ್ನು ನೋಡಲು ಕಷ್ಟಪಡುತ್ತಿದ್ದ ನನ್ನನ್ನು ನಮ್ಮಪ್ಪ ಹೆಗಲ ಮೇಲೆ ಎತ್ತಿಕೊಂಡು ತೋರಿಸಿ ಎಷ್ಟು ಕೆಂಪಗವರೆ ಅಲ್ವಾ ಎಂದಿದ್ದರು. ನಾನು ಹ್ಞೂ, ಅಪ್ಪೈ ಎಂದಿದ್ದೆ. ಅದಾದ ನಂತರ ನನಗೆ ಬುದ್ಧಿ ಬಂದ ಕಾಲದಿಂದಲೂ ರಾಜೀವ್ ಶೋಷಿತರ ಪರ ಕೆಲಸ ಮಾಡಿದ ಒಂದೂ ಸುದ್ದಿಯನ್ನೂ ಓದಲಿಲ್ಲ. ಆದರೆ ಅದೇ ಶತಮಾನಗಳಿಂದ ಗಿಡಗಂಟಿಗಳು ಬೆಳೆದಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯ ಬೀಗವನ್ನು ರಾಜೀವ್ ತೆಗೆಸಿದ ಸುದ್ಧಿಯನ್ನು ಓದಿದೆ! ಮುಂದೆ ಅದರಿಂದಾಶದ ಅನಾಹುತ ಇಡೀ ಜಗತ್ತಿಗೇ ತಿಳಿದಿದೆ.ರಾಹುಲ್ ಕೂಡ ತಮ್ಮ ತಂದೆಯ ಹಾಶಗೆ ಕೆಂಪಗೆ ಇದ್ದಾರೆ. ಮುಂದೆ ಅವರೂ ಕೂಡ ಪ್ರಧಾನಿಯಾಗಲಿದ್ದಾರೆ. ಆದರೆ ಆಶಯವೆಂದರೆ ರಾಹುಲ್ ಗಾಂಧಿಯವರು ತಮ್ಮ ತಂದೆಯವರು ಮಾಡಿದ ತಪ್ಪುಗಳನ್ನು ಪುನರಾವತರ್ಿಸುವುದು ಬೇಡ. ಅದಕ್ಕಾಗಿ ರಾಹುಲ್ಜೀಯವರು ಇಂತಹ ಸಂವಾದಗಳನ್ನು ನಡೆಸುವುದು ಬಿಟ್ಟು ತಮ್ಮ ತಂದೆಯ , ತಮ್ಮ ಅಜ್ಜಿ ಇಂದಿರಾಗಾಂಧಿಯವರ, ಮುತ್ತಾತ ಪಂಡಿತ್ ನೆಹರೂರವರ ಆಡಳಿತಾವಧಿಯನ್ನು ಕೂಲಂಕುಷವಾಗಿ ಅಧ್ಯಯನಮಾಡಲಿ. ತಪ್ಪುಒಪ್ಪುಗಳನ್ನು ಪರಿಶೀಲಿಸಲಿ .ಅದಕ್ಕೂ ಮೊದಲು ಸಂಸತ್ತಿನಲ್ಲಿ ಬಡವರ ಪರ, ಶೋಷಿತರ ಪರ ದನಿ ಎತ್ತಲಿ.ರಘೋತ್ತಮ ಹೊ. ಬಚಾನಮರಾಜನಗರ -ಮೊ; 9481189116
16 Aug
ರಾಹುಲ್ ಎಂಬ ಕೃತಕ ಮಿಂಚು
23 Jul
ಖೈರ್ಲಂಜಿ: ದಲಿತರಿಗೆ ಮರೀಚಿಕೆಯಾಗುತ್ತಿರುವ ನ್ಯಾಯ
ಅದು ಸೆಪ್ಟೆಂಬರ್ 29 2006. ಆ ದಿನ ಸಂಜೆ ಐದು ಗಂಟೆಯ ಸಮಯ . ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲ್ಲೂಕಿನ ಖೈಲರ್ಾಂಜಿ ಗ್ರಾಮದ ಏಕೈಕ ದಲಿತ ಕುಟುಂಬ ತನ್ನ ಪಾಡಿಗೆ ತಾನು ನಿತ್ಯದ ಕಾಯಕದಲ್ಲಿ ತೊಡಗಿತ್ತು. ಶ್ರೀ ಭಯ್ಯಾಲಾಲ್ ಭೂತ್ ಮಾಂಗೆ, ಅವರ ಶ್ರೀಮತಿ ಸುರೆಖ ಭೂತ್ ಮಾಂಗೆ ಮಕ್ಕಳಾದ ಪ್ರಿಯಾಂಕ, ರೋಶನ್, ಸುಧೀರ್ ಆ ಕುಟುಂಬದ ಸದಸ್ಯರು. ಭಯ್ಯಾಲಾಲ್ ಭೂತ್ ಮಾಂಗೆ ಹೊರಗೆ ಹೋಗಿದ್ದ ಆ ಸಮಯದಲದ್ಲಿ ಶ್ರೀಮತಿ ಸುರೇಖ ಅಡುಗೆ ಮಾಡುತ್ತಿದ್ದರು. ಮೂವರು ಮಕ್ಕಳಾದ ಪ್ರಿಯಾಂಕ, ರೋಹನ್, ಸುಧೀರ್ ಓದುತ್ತಾ ಕುಳಿತ್ತಿದ್ದರು. ಬಹುಶಃ ಅವರುಗಳಿಗೆ ಗೊತ್ತಿರಲಿಲ್ಲ ,ತಾವು ಓದುತ್ತಿರುವುದು ತಮ್ಮ ಜೀವನದ ಕಡೆಯ ಅಧ್ಯಾಯವನ್ನು ಎಂದು! ಏಕೆಂದರೆ ಆ ಸಮಯದಲ್ಲಿ ಸುಮಾರು 50 ರಿಂದ 60 ರಷ್ಟಿದ್ದ ಕ್ರೂರ ಮನಸ್ಸಿನ ಜಾತೀಯ ಹಿಂದುಗಳ ಗುಂಪೊಂದು ಅವರುಗಳ ಮೇಲೆ ಮುಗಿಬಿದ್ದಿತ್ತು ರಣಹದ್ದುಗಳಂತೆ. ಆ ಹದ್ದುಗಳಲ್ಲಿ ಜಾತೀಯತೆಯ ವಿಷಜ್ವಾಲೆ ತುಂಬಿತ್ತು, ದೌರ್ಜನ್ಯದ ಅಟ್ಟಹಾಸ ಕೇಕೆ ಹಾಕುತಿತ್ತು. ಅಂತಹ ಅಟ್ಟಹಾಸದ ಜ್ವಾಲೆಗೆ ಖೈಲರ್ಾಂಜಿಯ ಆ ಬಡ ಕುಟುಂಬ ಧಗಧಗನೆ ಉರಿದು ಹೋಯಿತು.
ಆದರೆ ಅದು ಉರಿದ ಪರಿ? ಬಹುಶಃ ಅದನ್ನು ಹೇಳಿಕೊಳ್ಳಲು ಮನಸ್ಸು ಒಂದರೆಘಳಿಗೆ ಬೆಚ್ಚಿಬೀಳುತ್ತದೆ. ಬರೆಯಲು ಕೈ ಗಡಗಡ ನಡುಗುತ್ತದೆ. ಭಯದಿಂದಲ್ಲ! ರೋಷದಿಂದ. ಏಕೆಂದರೆ ಅಲ್ಲಿ ನಡೆದ ದೌರ್ಜನ್ಯ ತನ್ನ ಮಿತಿಯನ್ನು ಮೀರಿತ್ತು. ದಾಳಿ ನಡೆದ ಆ ಪರಿ ಎಂತಹವರನ್ನು ಬೆಚ್ಚಿಬೀಳಿಸುವಂತ್ತಿತ್ತು.
ಸತ್ಯ ಶೋಧನಾಸಮಿತಿಯ ವರದಿಯ ಪ್ರಕಾರವೇ ಹೇಳುವುದಾದರೆ, ಆ ಗುಂಪು ಭೂತ್ಮಾಂಗೆಯ ಕುಟುಂಬದ ಅ ನಾಲ್ವರನ್ನು ಹೊಡೆಯಲು ಪ್ರಾರಂಭಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಹೊರಗೆ ಎಳೆದು ತಂದ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ನಗ್ನರನ್ನಾಗಿಸಿತು. ಅಲ್ಲದೆ ರೋಷನ್ನನ್ನು ತನ್ನ ಅಕ್ಕ ಪ್ರಿಯಾಂಕಳ ಜೊತೆ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿತು! ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮಮರ್ಾಂಗಕ್ಕೆ ತೀವ್ರವದ ಏಟುಗಳು ಬಿದ್ದವು. ಅಲ್ಲದೆ ಪ್ರಿಯಾಂಕಳನ್ನು ಬೆತ್ತಲೆಗೊಳಿಸಿದ ಗುಂಪು, ಅವಳ ವಕ್ಷ ಸ್ಥಳಕ್ಕೆ ಮಚ್ಚಿನಿಂದ ಹೊಡೆಯಿತು. ಅವಳ ಮಮರ್ಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿತು. ಅದಕ್ಕೂ ಮೊದಲು 19 ವರ್ಷದ ಅವಳನ್ನು ಗುಂಪು ಬಹಿರಂಗವಾಗಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿತು. ದುರಂತವೆಂದರೆ ಇದನ್ನು ಅಲ್ಲಿ ನೆರೆದಿದ್ದ ,ಮೇಲ್ಜಾತಿ ಹೆಂಗಸರು ಬೆಂಬಲಿಸಿದರು! ಅಲ್ಲದೆ ಗಂಡಸರನ್ನು ಹಾಗೆ ಮಾಡುವಂತೆ ಜೋರಾಗಿ ಕೂಗುತ್ತಾ ಮತ್ತಷ್ಟು ಹಿರಿದುಂಬಿದಸಿದರು! ಅಂತಿಮವಾಗಿ ಶ್ರೀಮತಿ ಸುರೇಖಾರನ್ನು ಅವರ ಮೂವರು ಮಕ್ಕಳ ಎದುರಿನಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಗುಂಪು ತಾಯಿ, ಮಗಳು ಮತ್ತು ತಮ್ಮಂದಿರಿಬ್ಬರನ್ನು ಒಳಗೊಂಡಂತೆ ನಾಲ್ವರನ್ನು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿತು. ದೌರ್ಜನ್ಯದ ಮದ ಏರಿದ ಆ ಗುಂಪು ಆ ನಾಲ್ವರನ್ನು ಕೊಂದು ಹೆಣಗಳನ್ನು ಸಮೀಪದ ನಾಲೆಗೆ ಎಸೆಯಿತು. ತನ್ಮೂಲಕ ದಲಿತರ ಮೇ;ಲಿನ ದೌರ್ಜನ್ಯದ ಮತ್ತೊಂದು ರಕ್ತಸಿಕ್ತ ಪುಟ ಇತಿಹಾಸವನ್ನು ಸೇರಿತು.
ಹಾಗಿದ್ದರೆ ಈ ಭೀಕರ ಹತ್ಯೆ ನಡೆದದ್ದು ಏತಕ್ಕೆ? ಪ್ರಕರಣವೊಂದರಲ್ಲಿ ಸವಣರ್ೀಯ ವ್ಯಕ್ತಿಯೊಬ್ಬನ ವಿರುದ್ಧ ಭೂತ್ಮಾಂಗೆಯ ಕುಟುಂಬ ಸಾಕ್ಷಿ ಹೇಳಿದ್ದಕ್ಕೆ ನಡೆದ ಸೇಡಿನ ಹತ್ಯೆ ಇದು ಎಂದು ಪೋಲೀಸ್ ಮತ್ತು ಕೋಟರ್ು ಹೇಳುತ್ತವೆಯಾದರೂ ಇದರ ಹಿಂದೆ ಒಂದು ಭಯಾನಕ ಪಿತೂರಿ ಇರುವುದನ್ನು ಅವು ಗಮನಿಸಲು ಹೋಗಿಲ್ಲ . ಮಂಡಲ್ ವರದಿಯ ವಿರುದ್ಧ “ಕಮಂಡಲ ಚಳುವಳಿ”ಯನ್ನು ಸಂಘಟಿಸಿ ಮಂಡಲ್ ವರದಿಯನ್ನು ದಿಕ್ಕು ತಪ್ಪಿಸಿದ್ದಂತದ್ದೆ ಮಾದರಿಯ ಪಿತೂರಿ ಇದು. ನಿಜ, ಮಂಡಲ್ ವರದಿಯ ವಿರುದ್ಧ ನಡೆದ ಆ ಪಿತೂರಿಯ ಹಿಂದೆ ಇದ್ದದ್ದು ಸಂಘ ಪರಿವಾರ. ಖೈಲರ್ಾಂಜಿ ಹತ್ಯೆಯ ಹಿಂದೆ ಇದ್ದದ್ದು ಕೂಡ ಅದೇ ಸಂಘ ಪರಿವಾರದ ಪಿತೂರಿ ಎನ್ನುತ್ತವೆ ಬಲ್ಲಮೂಲಗಳು! ಹಾಗಿದ್ದರೆ ಆ ಪಿತೂರಿಯಾದರೂ ಎಂತಹದ್ದು?
ಅದು ಘಟನೆ ನಡೆದ ಆ ವರ್ಷಕ್ಕೆ ಸಂಬಂದಿಸಿದ್ದು. 2006 ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ ಲಕ್ಷ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾ ಭೂಮಿಯಲ್ಲಿ 1956 ಅಕ್ಟೋಬರ್ 14 ರಂದು ಬೌದ್ಧ ಧರ್ಮ ಸ್ವೀಕರಿಸಿದ ಘಟನೆಯ ಐವತ್ತನೆಯ ವರ್ಷ. ಅಂಬೇಡ್ಕರರು ಬೌದ್ದಧರ್ಮ ಸ್ವೀಕರಿಸಿದ ಸಂಭ್ರಮದ ಆ ಸುವರ್ಣ ಮಹೋತ್ಸವವನ್ನಾಚರಿಸಲು ಆ ವರ್ಷ ಸೆಪ್ಟೆಂಬರ್ ಅಕ್ಟೋಬರ್ನ ಆ ಸಮಯದಲ್ಲಿ ದೆಶಾದ್ಯಂತ ಸಂಭ್ರಮದ ಸಿದ್ಧತೆ ನಡೆದಿತ್ತು. ಸುವರ್ಣ ಮಹೋತ್ಸವದ ಈ ಸಂಧರ್ಬದಲ್ಲಿ ಮತ್ತೆ ಹತ್ತು ಲಕ್ಷ ಮಂದಿ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧಧರ್ಮ ಸ್ವೀಕರಿಸುವ ಸಿದ್ಧತೆ ಕೂಡ ಭರದಿಂದ ಸಾಗಿತ್ತು. ಕ್ರೂರತನದ ಪರಮಾವಧಿಯೆಂದರೆ, ದಲಿತರು ಇತ್ತ ಸಿದ್ಧತೆಯಲ್ಲಿ ತೊಡಗಿದ್ದರೆ ಸಂಘಪರಿವಾರ ಇವರನ್ನು ಡಿಸ್ಟಬರ್್ ಮಾಡುವುದು ಹೇಗೆ ಎಂದು ಸಂಚು ರೂಪಿಸತೊಡಗಿತ್ತು! ಅಂತಹ ವ್ಯವಸ್ಥಿತ ಸಂಚಿನ, ಪಿತೂರಿಯ ಭಾಗವಾಗಿ ನಡೆದ ಘಟನೆಯೇ ಖೈಲರ್ಾಂಜಿಯ ಭೀಕರ ಹತ್ಯೆ. ಯಾಕೆಂದರೆ ಆ ಘಟನೆಯಲಿ ್ಲಮುಖ್ಯ ಪಾತ್ರ ವಹಿಸಿದ ಆರೋಪಿ ಭಾಸ್ಕರ್ ಕಾವಡೆ ಸ್ಥಳೀಯ ಬಿಜೆಪಿ ಮುಖಂಡ. ಇನ್ನು ಆತ ಸಂಘಪರಿವಾರದ ಸದಸ್ಯ ಎಂದು ಬೇರೆ ಹೇಳಬೇಕಾಗಿಲ್ಲ!
ಹತ್ಯೆ ನಡೆಯುತ್ತಿದ್ದಂತೆ ದೇಶದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದವು. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಧರಣಿ ಹೋರಾಟ ನಡೆಸಿದವು. ಒಂದರ್ಥದಲಿ ಸಂಘಪರಿವಾರದ ಸಂಚು ಫಲಿಸಿತ್ತು. ಖೈಲರ್ಾಂಜಿ ಹತ್ಯೆಯ ಸೂತಕದ ಹಿಂದೆ ಬಾಬಾಸಹೇಬರು ಬೌದ್ದಧರ್ಮ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂಭ್ರಮ ಕರಗಿಹೋಯಿತು.
ನಾಗಪುರದಲ್ಲಿ ಸಂಘಪರಿವಾರದ ಈ ಸಂಚು ಇನ್ನೂ ನಿಂತಿಲ್ಲ. ಅದಕ್ಕೋಸ್ಕರ ಪ್ರತ್ಯಕ್ಷವಾಗಿ ಕಂಡ ಘಟನೆ ಯೊಂದನ್ನು ಇಲ್ಲಿ ಹೇಳಲೇಬೇಕಾಗಿದೆ.
ನಾಗಪುರದ ದೀಕ್ಷಾಭೂಮಿ ದಲಿತರಿಗೆ ಪುಣ್ಯ ಭೂಮಿ. ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಕ್ರೈಸ್ತರು ಮತ್ತು ಯಹೂದ್ಯರಿಗೆ ಜೆರೂಸಲೆಂ ಹೇಗೋ, ಹಿಂದೂಗಳಿಗೆ ಕಾಶಿ ಮತ್ತಿತರ ಸ್ಥಳಗಳು ಹೇಗೋ ಹಾಗೆ ದಲಿತರಿಗೆ ನಾಗಪುರದ ದೀಕ್ಷಾಭೂಮಿ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಬಾಬಾಸಾಹೇಬರ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಶುಭ್ರ ಬಿಳಿ ವಸ್ತ್ರ ಧರಿಸಿ ದೇಶದ ಮೂಲೆಮೂಲೆಗಳಿಂದ ಒಂದೆಡೆ ಬಂದು ಸೇರುವ ದಲಿತರು ಬೌದ್ಧ ಧರ್ಮದ ದೀಕ್ಷೆ ಪಡೆಯುತ್ತಾರೆ. ಬುದ್ಧನ ಚಿಂತನೆಗಳೊಂದಿಗೆ ಮತ್ತೆ ತಮ್ಮ ಊರು ಸೇರುತ್ತಾರೆ.
ಇಂತಹದ್ದೆ ಒಂದು ಸಂಧರ್ಭ, ಅಂದರೆ 2008 ಅಕ್ಟೋಬರ್ 14 ರಂದು ನಾನು ಮತ್ತು ನನ್ನ ಐವರು ಸ್ನೇಹಿತರು ದೀಕ್ಷಾಭೂಮಿಗೆ ತೆರಳಿದ್ದೆವು. ಅಲ್ಲಿ ಕಳೆದ ಮೂರು ದಿನಗಳು ಬಹುಶಃ ನಮ್ಮ ಜೀವನದ ಪವಿತ್ರ ಕ್ಷಣಗಳು. ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಪವಿತ್ರ ಉಸಿರು ಮತ್ತು ಚಿಂತನೆ ತುಂಬಿರುತ್ತದೆ. . ಗೌತಮ ಬುದ್ಧರ ತನ್ನ ನೈಜ ದರುಶನ ನೀಡುತ್ತದೆ ಎಂದರೂ ತಪ್ಪಾಗಲಾರದು. ಇಂತಹ ಖುಷಿಯಲ್ಲಿ ನಾವಿರಬೇಕಾದರೆ ಸಂಘಪರಿವಾರದ ಪಿತೂರಿಯ ಸಣ್ಣ ಝಲಕ್ ಒಂದು ನಮ್ಮ ಕಣ್ಣೆದುರೇ ನಡೆಯಿತು. ಆ ಪಿತೂರಿ ಇಂತಿದೆ. ಇತ್ತ ಲಕ್ಷಾಂತರ ಜನ ದಲಿತರ ಗುಂಪು ಬುದ್ಧ ಅಂಬೇಡ್ಕರ್ ಎಂದು ದೀಕ್ಷೆ ಸ್ವೀಕರಿಸುವುದು , ವಸ್ತು ಪ್ರದರ್ಸನ ವೀಕ್ಷಿಒಸುವುದು, ಬುದ್ಧರ ತತ್ವಗಳನ್ನು ಕೇಳುವ ಬಿಜಿಯಲ್ಲಿದ್ದರೆ ಅತ್ತ ಎಲ್ಲಿಂದಲೋ ಕೇಸರಿ ವಸ್ತ್ರ ಧರಿಸಿದ ಕೈಯಲ್ಲಿ ತ್ರಿಶೂಲ ಹಿಡಿದ ವ್ಯಕ್ತಿಯೊಬ್ಬ ದಿಢೀರನೆ ನುಗ್ಗಿದ ! “ಜೈ ಶ್ರೀರಾಮ್” ಎಂಬ ಅವನ ಕೂಗು ಮೌನವಾಗಿ ಸಾಗುತ್ತಿದ್ದ ಆ ಜನರನ್ನು ಅವನೆಡೆ ತಿರುಗುವಂತೆ ಮಾಡಿತ್ತು. ತಕ್ಷಣ ಜಾಗೃತರಾದ ಅಲ್ಲೆ ಇದ್ದ ಸಮಾವೇಶದ ಸ್ವಯಂಸೇವಕರು ಆ ಕಾವಿಧಾರಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದರು. ಅಚ್ಚರಿಯ ವಿಷಯವೆನೆಂದರೆ ಒಬ್ಬನೇ ಒಬ್ಬ ದಲಿತನೂ ಕಿಂಚಿತ್ತು ಕದಲಿಲ್ಲ. ಯಾಕೆಂದರೆ ಅಲ್ಲೇನಾದರು ಗಲಿಬಿಲಿಯಾಗಿದ್ದರೆ ಕೇವಲ ಕಾಲ್ತುಳಿತದಿಂದಲೇ ಸಾವಿರಾರು ಜನ ಬಲಿಯಾಗುವ ಸಾಧ್ಯತೆಯಿತ್ತು. ಶಾಂತಚಿತ್ತದ ಸಮಭಾವದ ದಲಿತರು ಗಾಂಭೀರ್ಯತೆಯನ್ನು ಪ್ರದಶರ್ಿಸಿ ತಮ್ಮತನ ಮೆರೆದರು! ಆದರೆ ಆ ಸಂಧರ್ಭದಲ್ಲಿ ನಿಜಕ್ಕು ಆಕ್ರೋಶಕ್ಕೊಳಗಾದದ್ದು ನಾನು. ಆ ಕಾವಿಧಾರಿಯನ್ನು ಏನೂ ಮಾಡದೇ ಸುಮ್ಮನೆ ಪೋಲಿಸರಿಗೊಪ್ಪಿಸಿದರಲ್ಲಾ ಎಂದು ಕುಪಿತನಾದೆ. ಆದರೆ ನಂತರವೇ ತಿಳಿದದ್ದು ಸಂಘಪರಿವಾರದ ಇಂತಹ ಪಿತೂರಿಗಳು ಆಗಾಗ್ಗೆ ನಡೆಯುತ್ತಿರುತ್ತದೆ ಮತ್ತು ಖೈರ್ಲಂಜಿಯ ಹತ್ಯಾಕಾಂಡ ಅಂತಹ ಪಿತೂರಿಯ ಭೀಭತ್ಸ ಪ್ರದರ್ಶನ ಎಂದು.
ಖೈಲರ್ಾಂಜಿಯ ಈ ಭೀಕರ ಹತ್ಯಾಕಾಂಡದ ಬಗ್ಗೆ ಈಗ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಜುಲೈ 12 ರಂದು ಬಾಂಬೆ ಹೈಕೊಟರ್್ನ ನಾಗಪುರ ಪೀಠವು ಖೈಲರ್ಾಂಜಿಯ ಆರೋಪಿಗಳಿಗೆ ಸ್ಥಳೀಯ ವಿಚಾರಣಾ ನ್ಯಾಯಾಲಯವೊಂದು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ತನ್ಮೂಲಕ ಸ್ವತಂತ್ರ ಭಾರತದಲ್ಲಿ ದಲಿತರ ಭೀಕರ ಹತ್ಯಾಕಾಂಡದ ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯವೊಂದು ಪ್ರಥಮ ಬಾರಿಗೆ ಮರಣದಂಡನೆ ವಿಧಿಸಿದ್ದನ್ನು ಹೈಕೋಟರ್್ ರದ್ದು ಪಡಿಸಿದೆ. ಹೈಕೋಟರ್್ನ ಈ ತೀಪರ್ು ನಿಜಕ್ಕು ಆಘಾತಕಾರಿಯಾದದ್ದು. ಪ್ರಕರಣದ ಭೀಕರತೆಯು ಅಪರೂಪದಲ್ಲೆ ಅಪರೂಪ ಎನ್ನುವಂತಹದ್ದು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಲಯ ನೀಡಿದ್ದ ಮರಣದಂಡನೆಯ ತೀಪರ್ು ಸರಿಯಾಗೆ ಇತ್ತು. ಆದರೆ ಹೈಕೋಟ್ರ್ ಈಗ ಇದಕ್ಕೆ ವ್ಯತಿರಿಕ್ತ ತೀಪರ್ು ನೀಡಿದೆ!
ಹೈಕೋಟರ್್ನ ಈ ತೀಪರ್ಿನ ವಿರುದ್ಧ ಸುಪ್ರೀಂ ಕೊಟರ್್ನಲ್ಲಿ ಮೇಲ್ಮನವಿ ಸಲ್ಲಿಸುವುದೊಂದೆ ಈಗ ಉಳೀದಿರುವ ದಾರಿ. ಈ ನಿಟ್ಟಿನಲಿ ಮಹಾರಾಷ್ಟ್ರ ಸಕರ್ಾರ ಕ್ರಮ ಕೈಗೊಳ್ಳಬೇಕಿದೆ. ಸಿಬಿಐ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ದುರ್ಬಲ ವಾದ ಮಂಡಿಸಿರುವ ಆರೋಪ ಕೇಳೀ ಬಂದಿದೆ. ಈ ನಿಟ್ಟಿನಲಿ ಕೇಂದ್ರ ಸಕಾರ ಕೂಡ ಮಧ್ಯೆ ಪ್ರವೇಶಿಸಬೇಕಾಗಿದೆ. ದೌರ್ಜನ್ಯಕೋರರು ಮುಂದೆ ದೌರ್ಜನ್ಯ ಮಾಡಲು ಹೆದರಬೇಕಾದರೆ ಖೈರ್ಲಂಜಿಯ ಆರೋಪಿಗಳಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ಈ ನಿಟ್ಟಿನಲಿ ನ್ಯಾಯಲಯದ ಈ ತೀಪರ್ಿನ ವಿರುದ್ಧ ಶೋಷಿತ ಸಮುದಾಯ ದನಿಯೆತ್ತಬೇಕಿದೆ.
ಖೈಲರ್ಾಂಜಿಯಂತಹ ಪ್ರಕರಣಗಳು ಈಗ ನಿಂತಿದೆ ಎಂದಲ್ಲ . ಮೊನ್ನೆ ತುಮಕೂರಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆ ಹೊನ್ನಮ್ಮ ಳನ್ನು ಕಲ್ಲಿನಿಂದ ಜಜ್ಜಿ ಕೊಂದದ್ದು ಖೈಲರ್ಾಂಜಿಯ ಪುನರಾವರ್ತನೆಯಲ್ಲದೆ ಬೇರೇೆನಲ್ಲ. ಚರಂಡಿಯಲ್ಲಿ ಅರೆಜೀವದಿಂದ ಬಿದ್ದಿದ್ದ ಹೊನ್ನಮ್ಮ ‘ನೀರು, ನಿರು’ ಎಂದು ಅಂಗಲಾಚಿದಾಗ ದೌರ್ಜನ್ಯಕೊರ ಮನಸ್ಸುಗಳು ಮತ್ತೊಂದು ಕಲ್ಲು ಎತ್ತಿಹಾಕಿದ್ದು, ಖೈಲರ್ಾಂಜಿಯಲ್ಲಿ ಪ್ರಿಯಾಂಕಳ ಮಮರ್ಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿದ್ದು, ಬಹುಶಃ ಇಂತಹ ಭೀಬತ್ಸ ನೆನಪುಗಳಷ್ಟೆ ದಲಿತರಿಗೆ ಉಳಿಯುವುದು. ನ್ಯಾಯ? ಶುದ್ಧ ಮರೀಚಿಕೆಯಷ್ಟೆ.
ರಘೋತ್ತಮ ಹೊ. ಬ
ಚಾಮರಾಜನಗರ-571313
ಮೊಬೈಲ್ – 9481189116
21 Jul
ತಲೆಯ ಮೇಲೆ ಮಲ ಸುರಿದುಕೊಂಡರು
|
||||
10 Jul
“ನಾಗಸಿಧ್ಧಾರ್ಥ ಹೊಲೆಯಾರ್”, ವೈಚಾರಿಕ ಸಾಹಿತ್ಯದ ಹೊಸನೀರು
ಖ್ಯಾತ ತತ್ವಶಾಸ್ತ್ರಜ್ಙ ಹೆಚ್.ಡ್ರಮಂಡ್ ವೈಚಾರಿಕತೆಗೆ ಸಂಬಂಧಿಸಿದಂತೆ ಒಂದೆಡೆ ಹೀಗೆ ಹೇಳುತ್ತರೆ. ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ “ಜಾತಿ ನಿಮರ್ೂಲನೆ” ಎಂಬ ಕೃತಿಯ ಮುನ್ನುಡಿಯಲ್ಲಿ ಡ್ರಮಂಡ್ರ ಈ ಸಾಲುಗಳನ್ನು ಬಳಸಿಕೊಳ್ಳುತ್ತ್ತಾರೆ ಆ ಅದ್ಭುತ ಸಾಲುಗಳು ಇಂತಿವೆ.”ವಿಚಾರ ಮಾಡಲೊಲ್ಲದವನು ಮತಾಂಧ, ವಿಚಾರ ಮಾಡಲರಿಯದವನು ಮೂರ್ಖ, ವಿಚಾರ ಮಾಡಲಂಜುವವನು ಗುಲಾಮ”. ಬಹುಶಃ ವೈಚಾರಿಕತ ೆಅಧಾರಿತ ಸಮಾಜದ ದೃಷ್ಡಿಕೋನ ಹೇಗಿರಬೇಕೆಂಬುದಕ್ಕೆ ಡ್ರಮಂಡ್ರ ಈ ಸಾಲುಗಳು ಕನ್ನಡಿ ಹಿಡಿಯುತ್ತವೆ. ಇಂದು ಚಾಮಾರಾಜನಗರದಲ್ಲಿ ಬಿಡುಗಡರೆಯಾಗುತ್ತಿರುವ ನಾಗಸಿದ್ಧಾರ್ಥ ಹೊಲೆಯಾರರ ‘ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಕೃತಿ ಅಂತಹ ವೈಚಾರಿಕತೆಯ ಸಣ್ಣ ಬಿಂಬ ಎನ್ನಲಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ನಾಗಸಿದ್ಧಾರ್ಥ ಹೊಲೆಯಾರರ ಬದುಕು ಬರಹದ ಸಣ್ಣ ಚಿತ್ರಣ ಇಲ್ಲಿದೆ.
“ನಾಗಸಿದ್ಧಾರ್ಥ ಹೊಲೆಯಾರ್” ಎಂಬ ಕಾವ್ಯನಾಮದಿಂದ ಸಾಹಿತ್ಯ ಲೊಕಕ್ಕೆ ಪರಿಚಯವಾಗುತ್ತಿರುವ ಇವರ ಮೂಲ ಹೆಸರು ರಾಜಶೇಖರಮೂತರ್ಿ. ವೃತ್ತಿಯಲ್ಲಿ ಉಪತಹಸೀಲ್ದಾರರು, ಪ್ರವೃತ್ತಿಯಲಿ ಲೇಖಕ. ಲೇಖಕ ಅನ್ನುವದಕ್ಕಿಂತ ಸಂಶೋದಕ. ಆ ಸಂಶೋಧನೆಗೆ ಅಂಬೇಡ್ಕರ್ವಾದದ ನೆಲೆಗಟ್ಟಿದೆ. ಶೊಷಿತರ ಪರ ಕಾಳಜಿ ಇದೆ. ಸಾಮಾಜಿಕ ಹೊಣೆಗಾರಿಕೆಯ ನಿರತಂರ ತುಡಿತವಿದೆ.
ಸಿದ್ಧಾರ್ಥ ಹೊಲೆಯಾರರ ಜನ್ಮ ಸ್ಥಳ ಚಾಮಾರಾಜನಗರ ತಾಲ್ಲೂಕಿನ ಮಂಗಲ ಹೊಸುರು ಗ್ರಾಮ. ತಂದೆ ಎಸ್ ಬಸವಯ್ಯ, ತಾಯಿ ದೇವಾಜಮ್ಮ . ಇವರದು ಸುಶಿಕ್ಷಿತ ದಲಿತ ಕುಟುಂಬ. ಅಂತಹ ಶಿಕ್ಷಣದ ಸಂಸ್ಕಾರ ಇವರಿಗೆ ಅದುದರಿಂದಲೇ ಬಾಲ್ಯದಿಂದಲೆ ಇವರದು ಪ್ರಶ್ನಿಸುವ ಮನೋಭಾವ. ಕವನಗಳನ್ನು ಕಥೆಗಳನ್ನು ಬರೆಯುವ ಹುಚ್ಚು. ಸಮಾಜದ ಬದಲಾವಣೆಗೆ ತಹತಹಿಸುವ ಗುಣ. ಇಂತಹ ಗುಣವೇ ಇವರನ್ನು ನವದೆಹಲಿಯ ಖ್ಯಾತ ಸಂಶೋಧಕ ಶ್ರೀ ಎನ್. ಕೆ. ಶಮರ್ಾಜಿಯವರ ಸಂಪರ್ಕ ಪಡೆಯುವಂತೆ ಮಾಡಿದ್ದು. “ದಲಿತ್ ವಾಯ್ಸ್ ‘ ಆಂಗ್ಲ ಮಾಸಿಕದಲ್ಲಿ ಇವರ ಒಂದು ಪತ್ರ ಪ್ರಕಟವಾದದ್ದು, ಆ ಪತ್ರದ ಜಾಡು ಹಿಡಿದು ಶ್ರೀ ಎನ್. ಕೆ. ಶಮರ್ಾರವರು ಸಿದ್ಧಾರ್ಥ ಹೊಲೆಯಾರರನ್ನು ತಮ್ಮ ತೆಕ್ಕೆಗೆ ಸೆಳೆದು ಕೊಂಡದ್ದು, ಸಿದ್ದಾರ್ಥ ಹೊ;ಲೆಯಾರರ ವೈಚಾರಿಕತೆಗೆ ನೀರೆರೆದದ್ದು, ಬಹುಶಃ ವ್ಯಕ್ತಿಯೊಬ್ಬರ ಜೀವನಕ್ಕೆ ಸಿಗಬಹುದಾದ ನೈಜ ತಿರುವು ಎನ್ನಬಹುದು. ಸ್ವತಃ ಸಿದ್ಧಾರ್ಥ ಹೊಲೆಯಾರರೆ ” ನಾನೊಬ್ಬ ಲೇಖಕನಾಗಲು ನನಗೆ ಅಂಬೇಡ್ಕರ್ ವಾದದ ದೀಕ್ಷೆ ನೀಡಿದ ನನ್ನ ಪರಮ ಪೂಜ್ಯ ಗುರುಗಳಾದ ನವದೆಹಲಿಯ ಶ್ರೀ ಎನ್ ಕೆ ಶಮರ್ಾರವರೆ ಕಾರಣ ಎನ್ನುತ್ತಾರೆ. ಪ್ರಸ್ತುತ ಇಂದು ಬಿಡುಗಡೆಯಾಗುತ್ತಿರುವ ಕೃತಿ ಅಂತಹ ಅಂಬೇಡ್ಕರ್ವಾದದ ದೀಕ್ಷೆಯಿಂದ ಒಡಮೂಡಿದ ಕೃತಿ ಎಂದರೆ ಅತಿಶಯೋಕ್ತಿಯೇನಲ್ಲ.
ಹಾಗಿದ್ದರೆ ಈ ಕೃತಿಯಲ್ಲಿ ಅಂತಹದ್ದೇನಿದೆ? ಲೇಖಕರು ಪ್ರಾರಂಭದಲ್ಲೇ ಹೇಳುವ ಹಾಗೆ” ವಿಜ್ಞಾನ ಮತ್ತು ತಂತ್ರ ಜ್ಞಾನವನ್ನು ಅಜ್ಞಾನದ ಪ್ರಚಾರಕ್ಕೆ ದುರ್ಬಳಕೆ ಮಾಡುತ್ತಿರುವುದರಿಂದ ವೀಕ್ಷಕರ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಕಲಿಯುಗದ ಬಗ್ಗೆ ಜನರಲ್ಲಿರುವ ಮೌಢ್ಯ ದ ಬಗ್ಗೆ ಕೆಲವರಲ್ಲಾದರೂ ಜಾಗೃತಿಮೂಡಿಸುವ ಉದ್ದೇಶದಿಂದ ….” ಹೌದು , ಇಲ್ಲಿ ಮೌಢ್ಯದ ವಿರುದ್ಧ ಚಾಟಿಯನ್ನೆ ಬೀಸಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಲೇಖಕರು ಭಾರತದ ಇತಿಹಾಸವನ್ನು ಪುನರ್ರಚಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. “ಬೇಟೆಗಾರರಿಂದ ರಚಿತವಾದ ಇತಿಹಾಸ” ಆ ಬೇಟೆಗಾರರಿಂದ ತಪ್ಪಿಸಿಕೊಂಡ ಹುಲಿಯ ಇತಿಹಾಸ ಆಗಿರಲು ಹೇಗೆ ಸಾಧ್ಯ? ಎಂದು ಈ ದೇಶದ ಮೂಲನಿವಾಸಿಗಳ ಹಿನ್ನೆಲಿಯಲ್ಲಿ ಭಾರತದ “ಮನು ಪ್ರಣೀತ ” ಇತಿಹಾಸವನ್ನು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನಿಸುವ ಅವರು ಸುಮ್ಮನೇ ಕೂರುವುದಿಲ್ಲ. ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲು ವ ಪ್ರಯತ್ನವನ್ನೂ ಕೂಡ ಮಾಡುತ್ತಾರೆ. ಉದಾಹರಣೆಗೆ “ನಾಗ ಬೌದ್ಧ ಹೊಲೆಯರ ಇತಿಹಾಸ” ಎಂಬ ಲೇಖನದಲ್ಲಿ, ” ಹೊಲ” ಎಂದರೆ “ಭೂಮಿ,” “ಹೊಲೆಯ” ಎಂದರೆ “ಹೊಲದ ಒಡೆಯ” ಎಂದು ಹೊಲೆಯ ಎಂಬ ಪದಕ್ಕೆ ಹೊಸ ಅರ್ಥವನ್ನೇ ನೀಡುತ್ತಾರೆ. ಮತ್ತು ಇದಕ್ಕೆ ಸೂಕ್ತ ಆಧಾರವನ್ನು ಸಹ ನೀಡುತ್ತಾರೆ, ಮತ್ತೊಂದೆಡೆ ಅಂಬೇಡ್ಕರ್ರವರು “ಅಸ್ಪೃಶ್ಯರು ಮೂಲತಃ ನಾಗ ಜನಾಂಗದವರು” ಎಂದಿರುವುದಕ್ಕೆ ಸಮರ್ಥನೆಯಾಗಿ ಲೇಖಕರು, “ನಾಗರೀಕ”, “ನಾಗರೀಕತೆ”, “ನಗರ” ಈ ಪದಗಳು “ನಾಗ ಜನಾಂಗ ದ ವ್ಯಕಿ”್ತಯನ್ನು, “ನಾಗ ಜನಾಂಗದ ಸಂಸ್ಕೃತಿ”ಯನ್ನು, ಮತ್ತು “ಅವರು ವಾಸಿಸುತ್ತಿದ್ದ ಸ್ಥಳ”ಗಳನ್ನು ಸೂಚಿಸುತ್ತಿದ್ದವು ಎನ್ನುತ್ತಾರೆ.
ಒಟ್ಟಾರೆ ಹೊಲೆಯಾರರು ತಮ್ಮ ಈ ಕೃತಿಯಲ್ಲಿ ಇತಿಹಾಸವೆಂಬ ಗೀಜಗನ ಗೂಡಿಗೆ ಕೈ ಹಾಕುವ ಪ್ರಯತ್ನ ಮಾಡಿದ್ದಾರೆ. ಉದಹರಣೆಗೆ “ಬೌದ್ಧ ಬಿಕ್ಕು ಯೇಸು ಕ್ರಿಸ್ತ” ಎಂಬ ಲೇಖನ ಅಂತಹ ಪ್ರಯತ್ನಗಳಲ್ಲೊಂದು. ಅದಲ್ಲದೇ “ಪೇಜಾವರ ಶ್ರೀಗಳಿಗೊಂದು ಬಹಿರಂಗ ಪತ್ರ” ಎಂಬ ಲೇಖನದಲ್ಲಿ, “ಬುದ್ಧ, ಬೌದ್ಧ ಬಿಕ್ಕು ಮತ್ತು ಬಿಕ್ಕುಣಿಯರನ್ನು ಧರ್ಮಸ್ಥಳ ಮಂಜುನಾಥ, ತಿರುಪತಿಯ ಬಾಲಾಜಿ, ಕೇದಾರನಾಥ, ಶ್ರೀ ರಂಗನಾಥ,ಪುರಿಯ ಜಗನ್ನಥ, ಕಾಶಿ ವಿಶ್ವನಾಥ, ಕಂಚಿ ಕಾಮಕ್ಷಿ, ಮಧುರೈ ಮೀನಾಕ್ಷಿ, ಎಲ್ಲಮ್ಮ, ಪೊಲ್ಲಮ್ಮ, ಮಾರಮ್ಮ ಇತ್ಯಾದಿ ರೂಪಗಳಲ್ಲಿ ಪೂಜಿಸಲಾಗುತ್ತಿದೆ” ಎಂದು ಇತಿಹಾಸದ ಬುಡವನ್ನೆ ಅಲುಗಾಡಿಸುವ ಪ್ರಯತ್ನ ಮಾಡಿದ್ದಾರೆ.
ಇದಿಷ್ಟೆ ಅಲ್ಲದೆ ಅಸ್ಪೃಶ್ಯರ ಮಧ್ಯೆ ಇರುವ “ಎಡಗೈ-ಬಲಗೈ” ಸಮಸ್ಯೆಯ ಬಗ್ಗೆ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಬರೆಯುವ ಲೇಖಕರು , ಸಮಾಜದ ಅತ್ಯಂತ ತಳಸಮುದಾಯವಾದ ಜಲಗಾರರ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತಾ ” ಚಂದ್ರ ಲೋಕವೆಂಬ ನಿಜರ್ೀವ ಲೋಕದ ಬಗ್ಗೆ ತರಲೆಕೆಡಿಸಿಕೊಳ್ಳುವ ವಿಜ್ಞಾನಿಗಳು ಮ್ಯಾನ್ ಹೋಲ್ಗಳನ್ನು ಶುಚಿಗೊಳಿಸಲು ಇನ್ನೂ ಏಕೆ ಒಂದೂ ಯಂತ್ರವನ್ನು ಕಂಡುಹಿಡಿದಿಲ್ಲ? ಎಂದು ಆತಂಕದಿಂದ ಪ್ರಶ್ನಿಸುತ್ತಾರೆ. ಆ ನಿಟ್ಟಿನಲಿ ಮಾಹಿತಿತಂತ್ರಜ್ಞಾನ (ಐ. ಟಿ), ಜೈವಿಕ ತಂತ್ರಜ್ಞಾನ(ಬಿ,ಟಿ) ಯ ಹಾಗೆ ಶೌಚ ತಂತ್ರಜ್ಞಾನ (ಣಛಿಚಿತಜಟಿರರ ಖಿಜಛಿಟಿಠಟಠರಥಿ) ಕೂಡ ಅಭಿವೃದ್ಧಿಯಾಗಬೇಕು ಎಂಬ ಗಂಭೀರ ಸಲಹೆಯನ್ನು ನೀಡುತ್ತಾರೆ.
ಒಟ್ಟಾರೆ ನಾಗಸಿದ್ಧಾರ್ಥ ಹೊಲೆಯಾರರ ಈ ಕೃತಿ ಮಾನವ ಪರ ಕಾಳಜಿಯ ಕೃತಿಯಾಗಿದೆ. ಅದಕ್ಕೆ ಹೊಸ ದಿಕ್ಕು ಸೂಚಿಸುವ ಛಾತಿ ಇದೆ. ಎಲ್ಲವನ್ನು ನೇರವಾಗಿ ಹೇಳುವ ದಿಟ್ಟ ಗುಣ ಇದೆ. ಈ ಸಂಧರ್ಭದಲ್ಲಿ ಖ್ಯಾತ ಚಿಂತಕ ಜೆ. ಆರ್. ಲಾವೆಲ್ರ ಹೇಳಿಕೆ ಇಲ್ಲಿ ಉಲ್ಲೇಖನೀಯ, “ನಾವು ಮಾತನಾಡುತ್ತೇವೆ ನಮ್ಮನ್ನು ಎಲ್ಲರೂ ಕೇಲಿಸಿಕೊಳ್ಳಲಿ. ಇದರಿಂದ ಪ್ರಪಂಚದ ವ್ಯವಸ್ಥೆ ಬಿರುಕು ಬಿಟ್ಟರೂ ಬಿಡಲಿ, ನಾವು ಒಂದು ಶಬ್ಧವನ್ನೂ ಬಚ್ಚಿಡುವುದಿಲ್ಲ. ಆಡಿದ ಒಂದು ಅಕ್ಷರವನ್ನೂ ಹಿಂದಕ್ಕೆ ತೆಗೆದು ಕೊಳ್ಳುವುದಿಲ್ಲ. ಅಂಜುಬುರುಕರು ಅಂಜುತ್ತಿರಲಿ , ಹೇಡಿಗಳು ಹಿಂಜರಿಯಲಿ, ಸಂಪ್ರದಾಯವಾದಿಗಳು ಎದುರಾಗಿ ನಿಲ್ಲಲಿ, ನಾವು ಯಾವುದನ್ನು ಧೈರ್ಯದಿಂದ ವಿಚಾರಿಸಿದ್ದೇವೆಯೋ ಅದನ್ನು ಹೇಳುವ ಧೈರ್ಯವು ನಮಗಿದೆ.” ನಾಗಸಿದ್ಧಾರ್ಥ ಹೊಲೆಯಾರರು ಎಲ್ಲವನ್ನು ಧೈರ್ಯದಿಂದ ಹೇಳಿದ್ದಾರೆ. ಅವರು ಯಾವುದನ್ನೂ ಬಚ್ಚಿಟ್ಟಿಲ್ಲ. ಹಿಂಜರಿಯಲು ಹೋಗಿಲ್ಲ , ಅಂಜಿಕೆಯಂತೂ ಇಲ್ಲವೇ ಇಲ್ಲ. ಆದರೆ ಎಲ್ಲರೂ ಕೇಳಿಸಿ ಕೊಳ್ಳಲಿ ಎಂಬ ಕಳಕಳಿ ಇದೆ. ತನ್ನ ವಿಚಾರಗಳನ್ನು ಎಲ್ಲರಿಗೂ ಮುಟ್ಟಿಸಬೇಕೆಂಬ ಅಧಮ್ಯ ಉತ್ಸಾಹವಿದೆ. ಮತ್ತು ಹಾಗಯೇ ಸಮಯ ಕೂಡ ಇದೆ ಯಾಕೆಂದರೆ ಸಿದ್ಧಾರ್ಥ ಹೊಲೆಯಾರರಿಗೆ ಈಗಿನ್ನೂ ನಲವತ್ತು.
ಒಟ್ಟಿನಲಿ ನಾಗಸಿದ್ಧಾರ್ಥ ಹೊಲೆಯಾರರ ” ಬಾಬಾಸಾಹೇಬ್ ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಕಲಿಯುಗ” ಎಂಬ ಈ ಕೃತಿ ವೈಚಾರಿಕ ಸಾಹಿತ್ಯಕ್ಕ್ಕೆ ಹರಿದು ಬರುತ್ತಿರುವ ಸಣ್ಣ ತೊರೆ. ಓದುಗರು ಅದರ ಒಂದೊಂದು ಗುಟುಕನ್ನೂ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಸ್ವೀಕರಿಸಬೇಕಾಗಿದೆ. ಕಡೆಯದಾಗಿ ಕನ್ನಡ ಮರಾಠಿಯ ಮೊದಲ ದಲಿತ ಲೇಖಕ ಎಂದು ಗುರುತಿಸಲ್ಪಡುವ ದೇವರಾಯ ಹಿಂಗಳೆಯವರು ಅಂಬೇಡ್ಕರರನ್ನು ಕುರಿತು ಒಂದು ಕವನ ಬರೆದಿದ್ದಾರೆ. ಅದರ ಒಂದೆರಡು ಸಾಲುಗಳು ಇಂತಿವೆ.
ಅವನು ಸೂರ್ಯ
ನಾವು ಅವನ ತುಣುಕುಗಳು
ಲೇಖಕ ನಾಗಸಿದ್ಧಾರ್ಥ ಹೊಲೆಯಾತರರು ಅಂತಹ ತುಣುಕಿನ ಒಂದಂಶವಾಗಿ ಬೆಳಗಲಿ, ಕನ್ನಡ ಸಾಹಿತ್ಯದ ಆಸ್ತಿಯಾಗಲಿ ಎಂಬುದಷ್ಟೆ ಈ ಲೇಖನದ ಕಳಕಳಿ.
-ರಘೋತ್ತಮ ಹೊ.ಬ
ಚಾಮರಾಜನಗರ-571313
ಮೊಬೈಲ್-9481189116
16 Jun
ಮತಾಂತರಗೊಂಡ ದಲಿತರಿಗೂ ಮೀಸಲಾತಿ; ಕೇಂದ್ರಕ್ಕೆ ನೊಟೀಸ್
ಕ್ರಿಶ್ಚಿಯನ್, ಇಸ್ಲಾಮ್, ಪಾರ್ಸಿ ಮತ್ತು ಜೈನ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ನೀಡಬೇಕೆಂಬ ರಂಗನಾಥ ಮಿಶ್ರಾ ಆಯೋಗದ ಶಿಫಾರಸಿನ ಸಂಬಂಧ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದು ದಾಖಲಾಗಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೊಟೀಸ್ ಜಾರಿ ಮಾಡಿದೆ.
ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿರುವ ಅಖಿಲ ಭಾರತ ಕ್ರಿಶ್ಚಿಯನ್ ಫೆಡರೇಷನ್ ಎಂಬ ಸಂಸ್ಥೆಯು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದು, ಸರಕಾರದ ನಡೆಯೇನು ಎಂಬುದನ್ನು ಸುಪ್ರೀಂ ಕೋರ್ಟ್ ಇದೀಗ ಪ್ರಶ್ನಿಸಿದೆ.
ಸುಪ್ರೀಮ್ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ನೇತೃತ್ವದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ಅಲ್ಪಸಂಖ್ಯಾತರ ಮೀಸಲಾತಿ ಕುರಿತು ನೀಡಿರುವ ವರದಿಯನ್ನು ಲೋಕಸಭೆಯಲ್ಲಿ ಖುರ್ಷೀದ್ ಇತ್ತೀಚೆಗಷ್ಟೇ ಮಂಡಿಸಿದ್ದರು.
ಅದರ ಪ್ರಕಾರ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು, ಅಲ್ಲದೆ ಮತಾಂತರಗೊಂಡ ದಲಿತರಿಗೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ಶಿವಸೇನೆ ಮತ್ತಿತರ ಪಕ್ಷಗಳು ಹಾಗೂ ವಿಶ್ವ ಹಿಂದೂ ಪರಿಷತ್ಗಳು, ಪ್ರಸ್ತಾವಿತ ಮೀಸಲಾತಿ ಜಾರಿಗೊಂಡಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದವು.
ಈ ಸಂಬಂಧ ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ಬಿ.ಎಸ್. ಚೌಹಾನ್ ಅವರನ್ನೊಳಗೊಂಡ ಪೀಠವು, ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು ಜಾರಿಗೊಳಿಸುವ ಸಂಬಂಧ ಪ್ರತಿಕ್ರಿಯಿಸುವಂತೆ ಸಾಮಾಜಿಕ ನ್ಯಾಯ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.
ಮತಾಂತರ ಪ್ರಕರಣಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಕಟಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಆಯೋಗದ ಶಿಫಾರಸಿನಲ್ಲಿ ವ್ಯತ್ಯಾಸಗಳಿರುವುದರಿಂದ ರಂಗನಾಥ್ ಆಯೋಗದ ವರದಿ ಜಾರಿಯಾಗುವುದು ಕಷ್ಟ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನೂ ಹಿರಿಯ ವಕೀಲರುಗಳಾದ ಕೆ.ಕೆ. ವೇಣುಗೋಪಾಲ್ ಮತ್ತು ಡಿ. ವಿದ್ಯಾನಂದಮ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
16 Jun
ಜಾತಿ-ವಿರೋಧ
ಬುಧವಾರ – ಜೂನ್ -16-2010
ನಾನೆಂದೂ ಬ್ರಾಹ್ಮಣ ವಿರೋಧಿಯಾಗಿಲ್ಲ. ಆದರೆ ಯಾವತ್ತೂ ಜಾತಿ ವಿರೋಧಿಯಾಗಿದ್ದೇನೆ. ದಕ್ಷಿಣದ ಬ್ರಾಹ್ಮಣ ವಿರೋಧ, ಜಾತಿ ವಿರೋಧವಾಗಿ ಪರಿವರ್ತಿತವಾಗಬೇಕೆಂದು ಯೋಚಿಸುವಲ್ಲಿ ನಾನೊಂದು ತಪ್ಪು ಮಾಡಿದೆ. ರೆಡ್ಡಿ, ಮೊದಲಿಯಾರ್ ಹಾಗೂ ನಾಯರ್ರೊಳಗಿನ ಆಳುವ ಶಕ್ತಿಗಳು, ಕಳೆದ 50 ವರ್ಷಗಳಲ್ಲಿ ಬ್ರಾಹ್ಮಣರ ಮಟ್ಟಕ್ಕೆ ಬರಲೆಂದೇ ಬ್ರಾಹ್ಮಣ ವಿರೋಧಿಯಾಗಿದ್ದವು. ಈಗ ಅವರ ಮಟ್ಟಕ್ಕೆ-ಕನಿಷ್ಠ ಪಕ್ಷ ರಾಜಕೀಯದ ದೃಷ್ಟಿಯಿಂದ- ಬಂದ ಮೇಲೆ ಅವು ಸಂತೃಪ್ತವಾದಂತಿವೆ. ಇವರು ಮೀಸಲಾತಿಯ ಸಿದ್ಧಾಂತವನ್ನು ಕೈ ಬಿಟ್ಟಿದ್ದಾರೆ. ಒಂದು ಕಾಲಕ್ಕೆ ಬ್ರಾಹ್ಮಣರು ಮಾಡುತ್ತಿದ್ದಂತೆಯೇ ಅವರೂ ಕೂಡ ಈಗ ತಥಾಕಥಿತ ಜಾತಿಯ ಸರಕಾರ ವ್ಯವಸ್ಥೆಗೆ ವಿರೋಧಿಗಳಾಗಿದ್ದಾರೆ. ಜಾತಿಯ ವಿರುದ್ಧದ ಹೋರಾಟದಲ್ಲಿ, ದಕ್ಷಿಣ ಭಾರತ ಇಡೀ ಭಾರತಕ್ಕೆ ಮುಂದಾಳುತನ ವಹಿಸಬಲ್ಲದೆನ್ನುವ ನನ್ನ ಆಸೆಗೆ ಸದ್ಯಕ್ಕಂತೂ ಗ್ರಹಣ ಹಿಡಿದಿದೆ. ಕಾಪು, ಇಳವ, ಮಾಳಮಾದಿಗ, ಅನ್ನಾರ, ಆದಿವಾಸಿ, ಕ್ರಿಶ್ಚಿಯನ್ನರು ಹಾಗೂ ಇಂಥ ಮತ್ತಿತರರು, ಹಾಲಿ, ಸ್ತ್ರೀಯರೂ ಸಹ ಮೇಲೆದ್ದು ಚುನಾವಣೆಯಲ್ಲಿ ಪರಿಣಾಮಕಾರಿಯಾಗದ ಹೊರತು ಆಸೆಯೇ ಅಂಕುರಿಸಲಾರದು. ರೆಡ್ಡಿ, ನಾಯರ್, ಮೊದಲಿಯಾರರು ಹಿಂದುಳಿದ ಜಾತಿಯವರಲ್ಲವೇ ಅಲ್ಲ. ಅವರೆಂದೂ ಹಿಂದುಳಿದಿಲ್ಲ. ಧರ್ಮ ಎಂದೂ ತಮಗೆ ಪ್ರತಿಷ್ಠಿತ ಸ್ಥಾನ ನೀಡಲಿಲ್ಲವೆನ್ನುವ ಒಂದೇ ವ್ಯತ್ಯಾಸದೊಂದಿಗೆ ಇವರು, ಕ್ಷತ್ರಿಯರು, ವೈಶ್ಯರು ಹಾಗೂ ಕಾಯಸ್ಥರಂತೇ ಇದ್ದಾರೆ. ಅವಕಾಶದಿಂದ ಅರ್ಹತೆ ಹೊರಹೊಮ್ಮುತ್ತದೆನ್ನುವ ಹೊಸ ಸಿದ್ಧಾಂತವನ್ನು ಅಂಗೀಕರಿಸಲೇಬೇಕು. ಭಾರತದ ಜನಸಂಖ್ಯೆಯ ಶೇ.90ರಷ್ಟಾಗಿರುವ ಶೂದ್ರ, ಹರಿಜನ, ಮತೀಯ ಅಲ್ಪಸಂಖ್ಯಾತರೊಳಗಿನ ಹಿಂದುಳಿದ ಜಾತಿಗಳು, ಆದಿವಾಸಿಗಳು ಹಾಗೂ ಎಲ್ಲ ಸ್ತ್ರೀಯರಿಗೆ ದೇಶದ ಎಲ್ಲ ಉನ್ನತ ಅವಕಾಶಗಳ ಶೇ.60ರಷ್ಟನ್ನು ನೀಡಲೇಬೇಕು. ಅತ್ಯುನ್ನತ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ತತ್ತ್ವ ಅನ್ವಯವಾಗುತ್ತದೆ. ಈ ವಿಷಯದಲ್ಲಿ ಪ್ರಧಾನಿಯವರ ವಾದಗಳನ್ನು -ಆ ವಾದಗಳು ಕಪಟ ರೀತಿಯಲ್ಲಿ ಅರ್ಹತೆ, ಸಾಮರ್ಥ್ಯವನ್ನು ಆಧರಿಸಿವೆ-ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ. ದಿಲ್ಲಿಯ ಬಹುತೇಕ ಎಲ್ಲ ಆಡಳಿತಾಧಿಕಾರಿಗಳು, ಲೋಕಸಭೆಯ ಕಾರ್ಯದರ್ಶಿ, ಅಮೆರಿಕೆಯಲ್ಲಿನ ಭಾರತೀಯ ರಾಯಭಾರಿ ಇವರೆಲ್ಲ ಕಾಶ್ಮೀರಿ ಪಂಡಿತರೆ (ವರ್ಷ ಅಥವಾ ಎರಡು ವರ್ಷಗಳಲ್ಲಿ ಪ್ರಧಾನ ದಂಡನಾಯಕ ಕೂಡ ಕಾಶ್ಮೀರಿ ಪಂಡಿತನೇ ಆಗಬಹುದು)-ಹೀಗೇಕೆ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಇದನ್ನು ಪ್ರಧಾನಿಯ ವಿರುದ್ಧ ವೈಯಕ್ತಿಕ ದ್ವೇಷದವೆಂದು ಬಗೆಯಬಾರದು. ಯಾಕೆಂದರೆ ಸದ್ಯದ ಉತ್ತರ ಪ್ರದೇಶದ ಮುಖ್ಯಮಂತ್ರಿ; ಬಹುತೇಕ ಎಲ್ಲ ಉನ್ನತ ಸ್ಥಾನಗಳಿಗೆ ತನ್ನ ಜಾತಿಯವರನ್ನೇ ನೇಮಕ ಮಾಡಿದ್ದಾರೆ; ಹಿಂದೆ ಕಾಯಸ್ಥ ಮುಖ್ಯಮಂತ್ರಿ ಮಾಡಿದಂತೆ. ಒಬ್ಬ ವ್ಯಕ್ತಿ ತನ್ನೆಡೆಗೆ ತನ್ನ ಜಾತಿಯವರನ್ನೇ ಸೇರಿಸಿಕೊಳ್ಳುತ್ತಿರುವ ನಿಯಮವೊಂದು ನಮ್ಮ ದೇಶದಲ್ಲಿ ಪ್ರಚಲಿತವಾಗುತ್ತಿದೆ. ಯಾಕೆಂದರೆ ಅವರ ಭವಿಷ್ಯ ವೈಯಕ್ತಿಕವಾಗಿ ಪರಸ್ಪರರನ್ನೇ ಅವಲಂಬಿಸಿದಂತಿದೆ. ಈ ದೇಶವನ್ನು ಹೊಲಸುಗೆಡಿಸುತ್ತಿರುವ ಅಪಾಯಕಾರಿ ಜಾಲವನ್ನು ಕಿತ್ತೆಸೆಯಲು ಸುಯೋಜಿತ ಪ್ರಯತ್ನ ನಡೆಯಲೇಬೇಕು. ಜಾತಿಯ ಬಗ್ಗೆ ಮಾತಾಡಕೂಡದೆನ್ನುವುದರ ಅರ್ಥ ಭಾರತೀಯ ಸಂದರ್ಭದ ಏಕೈಕ ಮಹತ್ವದ ಸತ್ಯವನ್ನು ನೋಡದೆ ಕಣ್ಣು ಮುಚ್ಚುವುದೆಂದಾಯಿತು. ಬರಿ ಜಾತಿ ಹೊರಟು ಹೋಗಲೆಂದರೆ ಅದು ಹೊರಟು ಹೋಗುವುದಿಲ್ಲ. 5000 ವರ್ಷ ಹಳೆಯದಾಗಿರುವ ಸಾಮರ್ಥ್ಯಗಳ ಆಯ್ಕೆ ನಡೆದೇ ಇದೆ. ನಿರ್ದಿಷ್ಟ ಜಾತಿಗಳು ವಿಶೇಷ ಪ್ರತಿಭೆ ಪಡೆದಿವೆ. ಉದಾಹರಣೆಗೆ ಉದ್ದಿಮೆ ಹಾಗೂ ಹಣಕಾಸಿನ ವಿಷಯದಲ್ಲಿ ಮಾರವಾಡಿ, ಬನಿಯಾ ಮೇಲುಗೈ ಸಾಧಿಸಿದರೆ, ಸಾರಸ್ವತ ಬ್ರಾಹ್ಮಣ ಬೌದ್ಧಿಕ ಕ್ಷೇತ್ರದಲ್ಲಿ; ಇತರರಿಗೆ ಆದ್ಯತೆಯ ಅವಕಾಶ ಹಾಗೂ ವಿಶೇಷಾಧಿಕಾರ ನೀಡದ ಹೊರತು ಈ ಜಾತಿಗಳೊಂದಿಗೆ ಸ್ಪರ್ಧಿಸುವ ಮಾತು ಅಸಂಗತವಾಗುತ್ತದೆ. ಸಾಮರ್ಥ್ಯಗಳ ಸಂಕುಚಿತ ಆಯ್ಕೆಯನ್ನು ಒಟ್ಟಾರೆ ವಿಸ್ತಾರ ಗೊಳಿಸಬೇಕು. ಅದನ್ನು ಮಾಡಬೇಕಿದ್ದರೆ ಎರಡು-ಮೂರು ದಶಕಗಳವರೆಗೆ, ಹಿಂದುಳಿದ ಜಾತಿ ಹಾಗೂ ಸಮೂಹಗಳಿಗೆ ಆದ್ಯತೆಯ ಅವಕಾಶಗಳನ್ನು ಕಲ್ಪಿಸಿಕೊಡ ಬೇಕಾಗುತ್ತದೆ. ಉದ್ಯೋಗ ಹಾಗೂ ಶಿಕ್ಷಣದ ಅವಕಾಶಗಳ ಭೇದವಿದೆಯೆನ್ನುವುದನ್ನು ತೋರಿಸಬೇಕಾಗಿದೆ. ಯಾವುದೇ ವ್ಯಕ್ತಿಗೆ ಆತನ ಜಾತಿಯ ಕಾರಣದಿಂದಾಗಿ ಶೈಕ್ಷಣಿಕ ಸಂಸ್ಥೆಯ ಬಾಗಿಲನ್ನು ಮುಚ್ಚಕೂಡದು. ಸಮಾಜ ಇಲ್ಲಿಯವರೆಗೆ ವಿಶೇಷ ಅಧಿಕಾರ ನೀಡಿರುವವರಿಗೆ ಉದ್ಯೋಗದಿಂದ ದೂರವಿಟ್ಟರೆ ಅದು ನ್ಯಾಯವಾಗಿ ನಡೆದುಕೊಂಡಂತಾಗುತ್ತದೆ. ಬೇರೆಡೆಯಲ್ಲಿ ಅವರು ತಮ್ಮ ಜೀವನೋಪಾಯ ಕಂಡುಕೊಳ್ಳಲು ಅವರಿಗೆ ಅವಶ್ಯವಿರುವ ಶೈಕ್ಷಣಿಕ ಸಾಮರ್ಥ್ಯ ನೀಡುವುದಷ್ಟೇ ಸಮಾಜ ಮಾಡಬೇಕಾದದ್ದು.
-ಡಾ. ರಾಮಮನೋಹರ ಲೋಹಿಯಾ
curtys: Varthabharathi
16 Jun
ಜಾತಿ ಜನಗಣತಿ ಒಡೆಯುವುದಿಲ್ಲ, ದೇಶವನ್ನು ಒಂದಾಗಿಸುತ್ತದೆ
VB’s Editorial
ಜಾತಿ ಜನಗಣತಿ ಒಡೆಯುವುದಿಲ್ಲ, ದೇಶವನ್ನು ಒಂದಾಗಿಸುತ್ತದೆ
ಬುಧವಾರ – ಜೂನ್ -16-2010
ಜಾತಿ ಜನಗಣತಿಯಿಂದ ಒಡೆದು ಆಳುವ ನೀತಿಯನ್ನು ಎತ್ತಿ ಹಿಡಿದಂತಾಗುತ್ತದೆಯೇ? ಕೆಲವು ಸ್ಥಾಪಿತ ಹಿತಾಸಕ್ತಿಗಳು ಪದೇ ಪದೇ ಇಂತಹದೊಂದು ಅಭಿಪ್ರಾಯವನ್ನು ತೇಲಿ ಬಿಟ್ಟು, ಜಾತಿ ಜನಗಣತಿಯ ಚರ್ಚೆಯನ್ನು, ಅನಿವಾರ್ಯತೆಯನ್ನು ದಾರಿತಪ್ಪಿಸುವ ಪ್ರಯತ್ನ ನಡೆಸುತ್ತಿವೆ. ಜಾತಿ ಜನಗಣತಿಯಿಂದ ದೇಶದ ಅಖಂಡತೆಗೆ ಧಕ್ಕೆಯಿದೆಯೆನ್ನುವಂತಹ ಅಭಿಪ್ರಾಯ ಬರುವ ಮಾತುಗಳನ್ನು ಸ್ವತಃ ಕಾಂಗ್ರೆಸ್ನೊಳಗಿನ ನಾಯಕರೂ ವ್ಯಕ್ತಪಡಿಸಿದ್ದರು. ಹೌದೆ? ಜಾತಿ ಜನಗಣತಿಯೆಂದರೆ ಒಡೆದು ಆಳುವ ನೀತಿಯ ಮರು ಅನುಷ್ಠಾನವೆ?
ಇಷ್ಟಕ್ಕೂ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಷ್ಠಾನಕ್ಕೆ ತಂದವರು ಯಾರು? ಬ್ರಿಟಿಷರೆ? ಇದು ಮೊತ್ತ ಮೊದಲು ಚರ್ಚೆಯಾಗಬೇಕಾದ ವಿಷಯ. ಬ್ರಿಟಿಷರು ಈ ದೇಶದ ಹಿಂದೂ ಮತ್ತು ಮುಸ್ಲಿಮರ ನಡುವೆ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು. ದೇಶದ ಸೇನೆಯನ್ನು ಒಡೆದರು. ಸ್ವಾತಂತ್ರ ಹೋರಾಟಗಾರರನ್ನು ಒಡೆದರು. ಜನರನ್ನು ಒಡೆದರು. ಬಂಗಾಳವನ್ನೇ ಒಡೆದರು. ಆದರೆ ಮುಂದೆ, ಬ್ರಿಟಿಷರ ಈ ಒಡೆದು ಆಳುವ ನೀತಿಯ ವಿರುದ್ಧವೇ ಒಂದು ದೊಡ್ಡ ಚಳವಳಿ ನಡೆಯಿತು.ಅದು ಬೇರೆ ವಿಷಯ.
ಆದರೆ, ಒಡೆದು ಆಳುವ ನೀತಿಯನ್ನು ಜಾರಿಗೆ ತರಲು ಬ್ರಿಟಿಷರಿಗೆ ಮಾರ್ಗದರ್ಶಿಯಾದವರು ಯಾರು? ಒಡೆದು ಆಳುವ ನೀತಿಯನ್ನು ಅವರು ಯಾರಿಂದ ಕಲಿತರು?
ಈ ದೇಶಕ್ಕೆ ಬ್ರಿಟಿಷರು, ಮೊಗಲರು ಕಾಲಿಡುವ ಮೊದಲೇ ಅಂದರೆ ಶತಶತಮಾನಗಳ ಹಿಂದೆಯೇ ಇಲ್ಲಿ ಒಡೆದು ಆಳುವ ನೀತಿ ಜಾರಿಯಲ್ಲಿತ್ತು. ಪಂಚಮರು ಅಂದರೆ ದಲಿತರು ಊರಿಗೆ ಕಾಲಿಡಬಾರದು, ಸಾರ್ವಜನಿಕ ನೀರನ್ನು ಮುಟ್ಟಬಾರದು. ಶೂದ್ರರು ವಿದ್ಯೆ ಕಲಿಯಬಾರದು. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಿಗಾಗಿ ದುಡಿಯಬೇಕು. ಅವರ ಸೇವೆಯಿಂದಲೇ ಶೂದ್ರರಿಗೆ ಮುಕ್ತಿ. ವೈಶ್ಯರು ಮಾತ್ರ ವ್ಯಾಪಾರ ಮಾಡಬೇಕು.
ಕ್ಷತ್ರಿಯರು ಮಾತ್ರ ದೇಶ ಆಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ಷತ್ರಿಯರು, ವೈಶ್ಯರು ಸೇರಿದಂತೆ ಎಲ್ಲರೂ ಬ್ರಾಹ್ಮಣರಿಗೆ ತಲೆಬಾಗಬೇಕು. ಬ್ರಹ್ಮನ ತಲೆಯಿಂದ, ತೋಳಿನಿಂದ, ಎದೆಯಿಂದ, ಕಾಲಿನಿಂದ ಹುಟ್ಟಿದವರು ಎಂಬಿತ್ಯಾದಿ ಹೆಸರಲ್ಲಿ ಸಮಾಜವನ್ನು ಒಡೆದು, ಅವರನ್ನು ಆಳಿದ್ದು ಬ್ರಿಟಿಷರೂ ಅಲ್ಲ, ಮೊಗಲರೂ ಅಲ್ಲ, ದೆಹಲಿ ಸುಲ್ತಾನರೂ ಅಲ್ಲ. ಇದೇ ನೆಲದಲ್ಲಿ ಹುಟ್ಟಿದ ಮೇಲ್ವರ್ಣೀಯರೇ ಒದು ಆಳುವ ನೀತಿಗೆ ತಳಹದಿಯನ್ನು ಹಾಕಿ ಕೊಟ್ಟವರು.
ಒಡೆದು ಆಳುವ ನೀತಿಯ ಬೇರು, ಈ ದೇಶದ ವರ್ಣಾಶ್ರಮದಲ್ಲಿದೆ.ಒಂದೆರಡು ಶತಮಾನವಲ್ಲ, ಹಲವು ಸಹಸ್ರ ವರ್ಷಗಳ ಕಾಲ ಜಾತಿಯ ಆಧಾರದಲ್ಲಿ ಈ ದೇಶದ ಜನರನ್ನು ಒಡೆದು, ಸುಖಸುಪ್ಪತ್ತಿಗೆಯಲ್ಲಿ ಬದುಕಿದವರು ಇಲ್ಲಿನ ಮೇಲ್ವರ್ಣೀಯರು. ಅದರ ಫಲವಾಗಿ ಇಲ್ಲಿನ ಶೂದ್ರರು ಮತ್ತು ಪಂಚಮರು ಅಥವಾ ದಲಿತರು ತಮ್ಮ ಬದುಕನ್ನು ಸಂಪೂರ್ಣ ಮೇಲ್ವರ್ಣೀಯರ ಸುಖಕ್ಕಾಗಿ ಅರ್ಪಿಸಬೇಕಾಯಿತು. ವಿದ್ಯೆಯಿಲ್ಲದೆ, ಸ್ವಾತಂತ್ರವಿಲ್ಲದೆ ನರಳಬೇಕಾಯಿತು.
ಸಣ್ಣ ಸಂಖ್ಯೆಯ ಮೇಲ್ವರ್ಣೀಯರು ಬಹುಸಂಖ್ಯೆಯ ಜನರನ್ನು ಜಾತಿಯ ಹೆಸರಿನಲ್ಲಿ ಒಡೆಯುವ ಮೂಲಕ ಅವರನ್ನು ಬರ್ಬರವಾಗಿ ಶೋಷಿಸಿದರು.ಅಂತಹ ಶೋಷಣೆಯನ್ನು ಬ್ರಿಟಿಷರಾಗಲಿ, ಮೊಗಲರಾಗಲಿ ಈ ದೇಶದ ಜನರ ಮೇಲೆ ನಡೆಸಲಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿಟ್ಟಾಗ ಈ ನೆಲದಲ್ಲಿ ಒಡೆದು ಆಳುವ ನೀತಿ ಜಾರಿಯಲ್ಲಿತ್ತು. ಬ್ರಿಟಿಷರು ಇಲ್ಲಿಯ ಜನರನ್ನು ಗುಲಾಮರಾಗಿಸುವ ಮೊದಲೇ, ಇಲ್ಲಿರುವ ಬಹುಸಂಖ್ಯೆಯ ಜನರು ಸಣ್ಣ ಸಂಖ್ಯೆಯ ಮೇಲ್ವರ್ಣೀಯ ಬ್ರಾಹ್ಮಣರ ಗುಲಾಮರಾಗಿ ಬದುಕುತ್ತಿದ್ದರು.
ಕೇರಳದಂತಹ ರಾಜ್ಯದಲ್ಲಿ, ನಂಬೂದಿರಿಗಳ ಎದುರುಗಡೆ ಶೂದ್ರ ಮಹಿಳೆಯರು ರವಿಕೆಯನ್ನೂ ಧರಿಸುವಂತಿರಲಿಲ್ಲ. ಮಾನಮುಚ್ಚಿ ಬದುಕುವಂತಿರಲಿಲ್ಲ. ಮೇಲ್ವರ್ಣೀಯರ ಕ್ರೌರ್ಯ, ಒಡೆದು ಆಳುವ ರಾಜಕೀಯವನ್ನು ನೋಡಿ ಬ್ರಿಟಿಷರೇ ಬೆಚ್ಚಿ ಬಿದ್ದಿದ್ದರು. ಬ್ರಿಟಿಷರು ಕೆಲವು ಕಠೋರ ಕಾಯ್ದೆ ತಂದ ಬಳಿಕವಷ್ಟೇ ಬ್ರಾಹ್ಮಣರ ತಂತ್ರಕ್ಕೆ ಸೋಲಾಯಿತು. ಇಂದಿಗೂ ಒಡೆದು ಆಳುವ ಮೇಲ್ವರ್ಣೀಯರ ತಂತ್ರದ ಪ್ರಭಾವದಿಂದ ಶೋಷಿತ ಜನ ಹೊರಬಂದಿಲ್ಲ. ಜಾತಿ ಈ ದೇಶದಲ್ಲಿ ಇನ್ನೂ ಉಳಿದಿರುವುದೇ ಅದಕ್ಕೆ ಉದಾಹರಣೆ.
ಜಾತಿ ಜನಗಣತಿ ನಡೆಸುವುದು ದೇಶವನ್ನು ಒಡೆಯುವುದಕ್ಕಲ್ಲ. ಒಡೆದ ದೇಶವನ್ನು ಒಂದಾಗಿಸುವುದಕ್ಕಾಗಿ ಜಾತಿ ಜನಗಣತಿ ನಡೆಸಬೇಕಾಗಿದೆ. ಮೇಲ್ವರ್ಣೀಯರು ಒಡೆದ ಈ ಸಮಾಜವನ್ನು ಮತ್ತೆ ಮರು ಜೋಡಿಸುವುದಕ್ಕಾಗಿ ಜಾತಿ ಜನಗಣತಿಯನ್ನು ನಡೆಸಬೇಕು. ಇರುವ ಜಾತಿಗಳನ್ನು ಗುರುತಿಸಿ, ಅದರಲ್ಲಿ ಇನ್ನೂ ಮೇಲ್ವರ್ಣೀಯರ ಒಡೆದು ಆಳುವ ನೀತಿಗೆ ಬಲಿಯಾಗಿ, ಶೋಷಣೆಗೊಳಗಾಗುತ್ತಿರುವ ದುರ್ಬಲ ಜಾತಿಗಳನ್ನು ಗುರುತಿಸಬೇಕು.
ಬಳಿಕ ಅವುಗಳನ್ನು ಸಬಲವನ್ನಾಗಿಸುವ ಕೆಲಸ, ಬಲಿಷ್ಠವನ್ನಾಗಿಸುವ ಕೆಲಸ ನಡೆಯಬೇಕು. ಮೇಲ್ವರ್ಣೀಯರ ಹಿಡಿತದಿಂದ ಅವರನ್ನು ಸಂಪೂರ್ಣ ಸ್ವತಂತ್ರಗೊಳಿಸಬೇಕು. ಆ ಮೂಲಕ ಹಿಂದೂ ಧರ್ಮ ಬಲಿಷ್ಠವಾಗುತ್ತದೆ. ಜೊತೆಗೆ ದೇಶವೂ ಬಲಿಷ್ಠವಾಗುತ್ತದೆ. ಆದುದರಿಂದ ಜಾತಿ ಜನಗಣತಿ ನಡೆಯಲೇ ಬೇಕು. ಒಡೆದು ಆಳುವ ನೀತಿಯ ಹುನ್ನಾರಗಳ ವಿರುದ್ಧ ಜಾತಿ ಜನಗಣತಿ ಒಂದು ದೊಡ್ಡ ಅಸ್ತ್ರವಾಗಿದೆ. ಇದನ್ನು ವಿರೋಧಿಸುವವರು ಬಿಜೆಪಿಗರಿರಲಿ, ಆರೆಸ್ಸೆಸ್ಗರಿರಲಿ, ಕಾಂಗ್ರೆಸ್ಗರಿರಲಿ. ಅವರು ಜಾತಿ ಜನಗಣತಿಗೆ ಯಾಕೆ ಹೆದರುತ್ತಾರೆ ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
varthabharathi…