Posts Tagged ‘ಚಾಮರಾಜನಗರ’

ಖೈರ್ಲಂಜಿ: ದಲಿತರಿಗೆ ಮರೀಚಿಕೆಯಾಗುತ್ತಿರುವ ನ್ಯಾಯ


ಅದು ಸೆಪ್ಟೆಂಬರ್ 29 2006. ಆ ದಿನ ಸಂಜೆ ಐದು ಗಂಟೆಯ ಸಮಯ . ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲ್ಲೂಕಿನ ಖೈಲರ್ಾಂಜಿ ಗ್ರಾಮದ ಏಕೈಕ  ದಲಿತ ಕುಟುಂಬ ತನ್ನ ಪಾಡಿಗೆ ತಾನು  ನಿತ್ಯದ ಕಾಯಕದಲ್ಲಿ ತೊಡಗಿತ್ತು. ಶ್ರೀ ಭಯ್ಯಾಲಾಲ್ ಭೂತ್ ಮಾಂಗೆ, ಅವರ ಶ್ರೀಮತಿ ಸುರೆಖ ಭೂತ್ ಮಾಂಗೆ  ಮಕ್ಕಳಾದ ಪ್ರಿಯಾಂಕ, ರೋಶನ್, ಸುಧೀರ್  ಆ ಕುಟುಂಬದ ಸದಸ್ಯರು.  ಭಯ್ಯಾಲಾಲ್ ಭೂತ್ ಮಾಂಗೆ ಹೊರಗೆ ಹೋಗಿದ್ದ ಆ ಸಮಯದಲದ್ಲಿ ಶ್ರೀಮತಿ ಸುರೇಖ ಅಡುಗೆ ಮಾಡುತ್ತಿದ್ದರು. ಮೂವರು ಮಕ್ಕಳಾದ ಪ್ರಿಯಾಂಕ, ರೋಹನ್, ಸುಧೀರ್ ಓದುತ್ತಾ ಕುಳಿತ್ತಿದ್ದರು. ಬಹುಶಃ ಅವರುಗಳಿಗೆ ಗೊತ್ತಿರಲಿಲ್ಲ ,ತಾವು ಓದುತ್ತಿರುವುದು ತಮ್ಮ ಜೀವನದ ಕಡೆಯ  ಅಧ್ಯಾಯವನ್ನು ಎಂದು! ಏಕೆಂದರೆ  ಆ ಸಮಯದಲ್ಲಿ ಸುಮಾರು 50 ರಿಂದ 60 ರಷ್ಟಿದ್ದ ಕ್ರೂರ ಮನಸ್ಸಿನ ಜಾತೀಯ ಹಿಂದುಗಳ ಗುಂಪೊಂದು ಅವರುಗಳ ಮೇಲೆ ಮುಗಿಬಿದ್ದಿತ್ತು ರಣಹದ್ದುಗಳಂತೆ. ಆ ಹದ್ದುಗಳಲ್ಲಿ ಜಾತೀಯತೆಯ ವಿಷಜ್ವಾಲೆ ತುಂಬಿತ್ತು, ದೌರ್ಜನ್ಯದ ಅಟ್ಟಹಾಸ ಕೇಕೆ ಹಾಕುತಿತ್ತು. ಅಂತಹ ಅಟ್ಟಹಾಸದ ಜ್ವಾಲೆಗೆ ಖೈಲರ್ಾಂಜಿಯ ಆ ಬಡ ಕುಟುಂಬ ಧಗಧಗನೆ ಉರಿದು ಹೋಯಿತು.

ಆದರೆ ಅದು ಉರಿದ ಪರಿ? ಬಹುಶಃ ಅದನ್ನು ಹೇಳಿಕೊಳ್ಳಲು ಮನಸ್ಸು ಒಂದರೆಘಳಿಗೆ  ಬೆಚ್ಚಿಬೀಳುತ್ತದೆ. ಬರೆಯಲು ಕೈ ಗಡಗಡ ನಡುಗುತ್ತದೆ. ಭಯದಿಂದಲ್ಲ! ರೋಷದಿಂದ. ಏಕೆಂದರೆ  ಅಲ್ಲಿ ನಡೆದ ದೌರ್ಜನ್ಯ ತನ್ನ ಮಿತಿಯನ್ನು ಮೀರಿತ್ತು. ದಾಳಿ ನಡೆದ ಆ ಪರಿ ಎಂತಹವರನ್ನು ಬೆಚ್ಚಿಬೀಳಿಸುವಂತ್ತಿತ್ತು.

ಸತ್ಯ ಶೋಧನಾಸಮಿತಿಯ ವರದಿಯ ಪ್ರಕಾರವೇ ಹೇಳುವುದಾದರೆ, ಆ ಗುಂಪು ಭೂತ್ಮಾಂಗೆಯ  ಕುಟುಂಬದ ಅ ನಾಲ್ವರನ್ನು ಹೊಡೆಯಲು ಪ್ರಾರಂಭಿಸಿತು. ದರದರನೆ ಎಲ್ಲರನ್ನು ಗುಡಿಸಲಿನಿಂದ ಹೊರಗೆ ಎಳೆದು ತಂದ ಗುಂಪು, ಎಲ್ಲರ ಬಟ್ಟೆಗಳನ್ನು ಕಿತ್ತೆಸೆದು ನಗ್ನರನ್ನಾಗಿಸಿತು.  ಅಲ್ಲದೆ ರೋಷನ್ನನ್ನು ತನ್ನ ಅಕ್ಕ  ಪ್ರಿಯಾಂಕಳ ಜೊತೆ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿತು! ರೋಷನ್ ಅದಕ್ಕೆ ನಿರಾಕರಿಸಿದ್ದಕ್ಕೆ ಅವನ ಮಮರ್ಾಂಗಕ್ಕೆ ತೀವ್ರವದ ಏಟುಗಳು ಬಿದ್ದವು. ಅಲ್ಲದೆ ಪ್ರಿಯಾಂಕಳನ್ನು ಬೆತ್ತಲೆಗೊಳಿಸಿದ ಗುಂಪು,  ಅವಳ ವಕ್ಷ ಸ್ಥಳಕ್ಕೆ ಮಚ್ಚಿನಿಂದ ಹೊಡೆಯಿತು. ಅವಳ ಮಮರ್ಾಂಗಕ್ಕೆ ಚೂಪಾದ ದೊಣ್ಣೆಯಿಂದ ಚುಚ್ಚಿತು. ಅದಕ್ಕೂ ಮೊದಲು 19 ವರ್ಷದ ಅವಳನ್ನು ಗುಂಪು ಬಹಿರಂಗವಾಗಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿತು. ದುರಂತವೆಂದರೆ ಇದನ್ನು ಅಲ್ಲಿ ನೆರೆದಿದ್ದ ,ಮೇಲ್ಜಾತಿ ಹೆಂಗಸರು ಬೆಂಬಲಿಸಿದರು! ಅಲ್ಲದೆ ಗಂಡಸರನ್ನು ಹಾಗೆ ಮಾಡುವಂತೆ ಜೋರಾಗಿ ಕೂಗುತ್ತಾ ಮತ್ತಷ್ಟು ಹಿರಿದುಂಬಿದಸಿದರು! ಅಂತಿಮವಾಗಿ ಶ್ರೀಮತಿ ಸುರೇಖಾರನ್ನು ಅವರ ಮೂವರು ಮಕ್ಕಳ ಎದುರಿನಲ್ಲಿಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಗುಂಪು ತಾಯಿ, ಮಗಳು ಮತ್ತು ತಮ್ಮಂದಿರಿಬ್ಬರನ್ನು ಒಳಗೊಂಡಂತೆ ನಾಲ್ವರನ್ನು ಗ್ರಾಮದ ತುಂಬೆಲ್ಲಾ ಅಟ್ಟಾಡಿಸಿತು. ದೌರ್ಜನ್ಯದ ಮದ ಏರಿದ ಆ ಗುಂಪು ಆ ನಾಲ್ವರನ್ನು ಕೊಂದು ಹೆಣಗಳನ್ನು ಸಮೀಪದ ನಾಲೆಗೆ ಎಸೆಯಿತು. ತನ್ಮೂಲಕ ದಲಿತರ ಮೇ;ಲಿನ ದೌರ್ಜನ್ಯದ ಮತ್ತೊಂದು ರಕ್ತಸಿಕ್ತ ಪುಟ ಇತಿಹಾಸವನ್ನು ಸೇರಿತು.

ಹಾಗಿದ್ದರೆ ಈ ಭೀಕರ ಹತ್ಯೆ ನಡೆದದ್ದು ಏತಕ್ಕೆ? ಪ್ರಕರಣವೊಂದರಲ್ಲಿ ಸವಣರ್ೀಯ ವ್ಯಕ್ತಿಯೊಬ್ಬನ ವಿರುದ್ಧ ಭೂತ್ಮಾಂಗೆಯ ಕುಟುಂಬ ಸಾಕ್ಷಿ ಹೇಳಿದ್ದಕ್ಕೆ ನಡೆದ ಸೇಡಿನ ಹತ್ಯೆ ಇದು ಎಂದು ಪೋಲೀಸ್ ಮತ್ತು ಕೋಟರ್ು ಹೇಳುತ್ತವೆಯಾದರೂ ಇದರ ಹಿಂದೆ ಒಂದು ಭಯಾನಕ ಪಿತೂರಿ ಇರುವುದನ್ನು ಅವು ಗಮನಿಸಲು ಹೋಗಿಲ್ಲ . ಮಂಡಲ್ ವರದಿಯ ವಿರುದ್ಧ “ಕಮಂಡಲ ಚಳುವಳಿ”ಯನ್ನು  ಸಂಘಟಿಸಿ ಮಂಡಲ್ ವರದಿಯನ್ನು ದಿಕ್ಕು ತಪ್ಪಿಸಿದ್ದಂತದ್ದೆ ಮಾದರಿಯ ಪಿತೂರಿ ಇದು. ನಿಜ, ಮಂಡಲ್ ವರದಿಯ ವಿರುದ್ಧ ನಡೆದ  ಆ ಪಿತೂರಿಯ ಹಿಂದೆ ಇದ್ದದ್ದು ಸಂಘ ಪರಿವಾರ. ಖೈಲರ್ಾಂಜಿ ಹತ್ಯೆಯ  ಹಿಂದೆ ಇದ್ದದ್ದು ಕೂಡ ಅದೇ ಸಂಘ ಪರಿವಾರದ ಪಿತೂರಿ ಎನ್ನುತ್ತವೆ ಬಲ್ಲಮೂಲಗಳು! ಹಾಗಿದ್ದರೆ ಆ ಪಿತೂರಿಯಾದರೂ ಎಂತಹದ್ದು?

ಅದು ಘಟನೆ ನಡೆದ ಆ ವರ್ಷಕ್ಕೆ ಸಂಬಂದಿಸಿದ್ದು. 2006 ಬಾಬಾಸಾಹೇಬ್ ಅಂಬೇಡ್ಕರ್ರವರು ತಮ್ಮ ಲಕ್ಷ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾ ಭೂಮಿಯಲ್ಲಿ 1956 ಅಕ್ಟೋಬರ್ 14 ರಂದು   ಬೌದ್ಧ ಧರ್ಮ ಸ್ವೀಕರಿಸಿದ ಘಟನೆಯ ಐವತ್ತನೆಯ ವರ್ಷ.  ಅಂಬೇಡ್ಕರರು ಬೌದ್ದಧರ್ಮ ಸ್ವೀಕರಿಸಿದ  ಸಂಭ್ರಮದ ಆ ಸುವರ್ಣ ಮಹೋತ್ಸವವನ್ನಾಚರಿಸಲು  ಆ ವರ್ಷ ಸೆಪ್ಟೆಂಬರ್ ಅಕ್ಟೋಬರ್ನ ಆ ಸಮಯದಲ್ಲಿ ದೆಶಾದ್ಯಂತ ಸಂಭ್ರಮದ ಸಿದ್ಧತೆ ನಡೆದಿತ್ತು.  ಸುವರ್ಣ ಮಹೋತ್ಸವದ ಈ ಸಂಧರ್ಬದಲ್ಲಿ ಮತ್ತೆ ಹತ್ತು ಲಕ್ಷ ಮಂದಿ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧಧರ್ಮ ಸ್ವೀಕರಿಸುವ ಸಿದ್ಧತೆ ಕೂಡ ಭರದಿಂದ ಸಾಗಿತ್ತು. ಕ್ರೂರತನದ ಪರಮಾವಧಿಯೆಂದರೆ, ದಲಿತರು ಇತ್ತ ಸಿದ್ಧತೆಯಲ್ಲಿ ತೊಡಗಿದ್ದರೆ  ಸಂಘಪರಿವಾರ ಇವರನ್ನು ಡಿಸ್ಟಬರ್್  ಮಾಡುವುದು ಹೇಗೆ ಎಂದು ಸಂಚು ರೂಪಿಸತೊಡಗಿತ್ತು! ಅಂತಹ ವ್ಯವಸ್ಥಿತ ಸಂಚಿನ, ಪಿತೂರಿಯ ಭಾಗವಾಗಿ ನಡೆದ ಘಟನೆಯೇ ಖೈಲರ್ಾಂಜಿಯ ಭೀಕರ ಹತ್ಯೆ. ಯಾಕೆಂದರೆ ಆ ಘಟನೆಯಲಿ ್ಲಮುಖ್ಯ ಪಾತ್ರ ವಹಿಸಿದ ಆರೋಪಿ ಭಾಸ್ಕರ್ ಕಾವಡೆ ಸ್ಥಳೀಯ ಬಿಜೆಪಿ ಮುಖಂಡ. ಇನ್ನು ಆತ ಸಂಘಪರಿವಾರದ ಸದಸ್ಯ ಎಂದು ಬೇರೆ ಹೇಳಬೇಕಾಗಿಲ್ಲ!

ಹತ್ಯೆ ನಡೆಯುತ್ತಿದ್ದಂತೆ ದೇಶದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದವು. ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಧರಣಿ ಹೋರಾಟ ನಡೆಸಿದವು. ಒಂದರ್ಥದಲಿ ಸಂಘಪರಿವಾರದ ಸಂಚು ಫಲಿಸಿತ್ತು. ಖೈಲರ್ಾಂಜಿ ಹತ್ಯೆಯ ಸೂತಕದ ಹಿಂದೆ ಬಾಬಾಸಹೇಬರು ಬೌದ್ದಧರ್ಮ ಸ್ವೀಕರಿಸಿದ ಸುವರ್ಣ ಮಹೋತ್ಸವದ ಸಂಭ್ರಮ ಕರಗಿಹೋಯಿತು.

ನಾಗಪುರದಲ್ಲಿ  ಸಂಘಪರಿವಾರದ ಈ ಸಂಚು ಇನ್ನೂ ನಿಂತಿಲ್ಲ. ಅದಕ್ಕೋಸ್ಕರ ಪ್ರತ್ಯಕ್ಷವಾಗಿ ಕಂಡ ಘಟನೆ ಯೊಂದನ್ನು ಇಲ್ಲಿ ಹೇಳಲೇಬೇಕಾಗಿದೆ.

ನಾಗಪುರದ ದೀಕ್ಷಾಭೂಮಿ ದಲಿತರಿಗೆ ಪುಣ್ಯ ಭೂಮಿ. ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಕ್ರೈಸ್ತರು ಮತ್ತು ಯಹೂದ್ಯರಿಗೆ ಜೆರೂಸಲೆಂ ಹೇಗೋ, ಹಿಂದೂಗಳಿಗೆ ಕಾಶಿ ಮತ್ತಿತರ ಸ್ಥಳಗಳು ಹೇಗೋ ಹಾಗೆ ದಲಿತರಿಗೆ ನಾಗಪುರದ ದೀಕ್ಷಾಭೂಮಿ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಇಲ್ಲಿಗೆ 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಬಾಬಾಸಾಹೇಬರ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಶುಭ್ರ ಬಿಳಿ ವಸ್ತ್ರ ಧರಿಸಿ ದೇಶದ  ಮೂಲೆಮೂಲೆಗಳಿಂದ ಒಂದೆಡೆ ಬಂದು ಸೇರುವ ದಲಿತರು ಬೌದ್ಧ ಧರ್ಮದ ದೀಕ್ಷೆ ಪಡೆಯುತ್ತಾರೆ. ಬುದ್ಧನ ಚಿಂತನೆಗಳೊಂದಿಗೆ ಮತ್ತೆ ತಮ್ಮ ಊರು ಸೇರುತ್ತಾರೆ.

ಇಂತಹದ್ದೆ ಒಂದು ಸಂಧರ್ಭ, ಅಂದರೆ 2008 ಅಕ್ಟೋಬರ್ 14 ರಂದು ನಾನು ಮತ್ತು ನನ್ನ ಐವರು ಸ್ನೇಹಿತರು ದೀಕ್ಷಾಭೂಮಿಗೆ ತೆರಳಿದ್ದೆವು. ಅಲ್ಲಿ ಕಳೆದ ಮೂರು ದಿನಗಳು ಬಹುಶಃ ನಮ್ಮ ಜೀವನದ ಪವಿತ್ರ ಕ್ಷಣಗಳು. ಅಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ಪವಿತ್ರ ಉಸಿರು ಮತ್ತು ಚಿಂತನೆ ತುಂಬಿರುತ್ತದೆ. . ಗೌತಮ ಬುದ್ಧರ ತನ್ನ ನೈಜ ದರುಶನ ನೀಡುತ್ತದೆ ಎಂದರೂ ತಪ್ಪಾಗಲಾರದು. ಇಂತಹ ಖುಷಿಯಲ್ಲಿ ನಾವಿರಬೇಕಾದರೆ ಸಂಘಪರಿವಾರದ ಪಿತೂರಿಯ ಸಣ್ಣ ಝಲಕ್ ಒಂದು ನಮ್ಮ ಕಣ್ಣೆದುರೇ ನಡೆಯಿತು. ಆ ಪಿತೂರಿ ಇಂತಿದೆ. ಇತ್ತ ಲಕ್ಷಾಂತರ ಜನ ದಲಿತರ ಗುಂಪು ಬುದ್ಧ ಅಂಬೇಡ್ಕರ್ ಎಂದು ದೀಕ್ಷೆ ಸ್ವೀಕರಿಸುವುದು , ವಸ್ತು ಪ್ರದರ್ಸನ ವೀಕ್ಷಿಒಸುವುದು, ಬುದ್ಧರ ತತ್ವಗಳನ್ನು ಕೇಳುವ ಬಿಜಿಯಲ್ಲಿದ್ದರೆ ಅತ್ತ ಎಲ್ಲಿಂದಲೋ ಕೇಸರಿ ವಸ್ತ್ರ ಧರಿಸಿದ ಕೈಯಲ್ಲಿ ತ್ರಿಶೂಲ ಹಿಡಿದ ವ್ಯಕ್ತಿಯೊಬ್ಬ ದಿಢೀರನೆ ನುಗ್ಗಿದ ! “ಜೈ ಶ್ರೀರಾಮ್” ಎಂಬ ಅವನ ಕೂಗು ಮೌನವಾಗಿ ಸಾಗುತ್ತಿದ್ದ ಆ ಜನರನ್ನು ಅವನೆಡೆ ತಿರುಗುವಂತೆ ಮಾಡಿತ್ತು. ತಕ್ಷಣ ಜಾಗೃತರಾದ ಅಲ್ಲೆ ಇದ್ದ ಸಮಾವೇಶದ ಸ್ವಯಂಸೇವಕರು ಆ ಕಾವಿಧಾರಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದರು. ಅಚ್ಚರಿಯ ವಿಷಯವೆನೆಂದರೆ ಒಬ್ಬನೇ ಒಬ್ಬ ದಲಿತನೂ ಕಿಂಚಿತ್ತು ಕದಲಿಲ್ಲ. ಯಾಕೆಂದರೆ ಅಲ್ಲೇನಾದರು ಗಲಿಬಿಲಿಯಾಗಿದ್ದರೆ ಕೇವಲ ಕಾಲ್ತುಳಿತದಿಂದಲೇ ಸಾವಿರಾರು ಜನ ಬಲಿಯಾಗುವ ಸಾಧ್ಯತೆಯಿತ್ತು.  ಶಾಂತಚಿತ್ತದ ಸಮಭಾವದ ದಲಿತರು ಗಾಂಭೀರ್ಯತೆಯನ್ನು ಪ್ರದಶರ್ಿಸಿ ತಮ್ಮತನ ಮೆರೆದರು! ಆದರೆ ಆ ಸಂಧರ್ಭದಲ್ಲಿ ನಿಜಕ್ಕು ಆಕ್ರೋಶಕ್ಕೊಳಗಾದದ್ದು ನಾನು. ಆ ಕಾವಿಧಾರಿಯನ್ನು ಏನೂ ಮಾಡದೇ ಸುಮ್ಮನೆ ಪೋಲಿಸರಿಗೊಪ್ಪಿಸಿದರಲ್ಲಾ ಎಂದು ಕುಪಿತನಾದೆ. ಆದರೆ ನಂತರವೇ ತಿಳಿದದ್ದು ಸಂಘಪರಿವಾರದ ಇಂತಹ ಪಿತೂರಿಗಳು ಆಗಾಗ್ಗೆ ನಡೆಯುತ್ತಿರುತ್ತದೆ ಮತ್ತು ಖೈರ್ಲಂಜಿಯ ಹತ್ಯಾಕಾಂಡ ಅಂತಹ ಪಿತೂರಿಯ ಭೀಭತ್ಸ ಪ್ರದರ್ಶನ ಎಂದು.

ಖೈಲರ್ಾಂಜಿಯ ಈ ಭೀಕರ ಹತ್ಯಾಕಾಂಡದ  ಬಗ್ಗೆ ಈಗ ಯಾಕೆ ಹೇಳಬೇಕಾಯಿತೆಂದರೆ ಮೊನ್ನೆ ಜುಲೈ 12 ರಂದು ಬಾಂಬೆ ಹೈಕೊಟರ್್ನ ನಾಗಪುರ ಪೀಠವು ಖೈಲರ್ಾಂಜಿಯ ಆರೋಪಿಗಳಿಗೆ ಸ್ಥಳೀಯ ವಿಚಾರಣಾ ನ್ಯಾಯಾಲಯವೊಂದು ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ತನ್ಮೂಲಕ ಸ್ವತಂತ್ರ ಭಾರತದಲ್ಲಿ ದಲಿತರ ಭೀಕರ ಹತ್ಯಾಕಾಂಡದ ಆರೋಪಿಗಳಿಗೆ ಕೆಳಹಂತದ ನ್ಯಾಯಾಲಯವೊಂದು ಪ್ರಥಮ ಬಾರಿಗೆ ಮರಣದಂಡನೆ ವಿಧಿಸಿದ್ದನ್ನು ಹೈಕೋಟರ್್ ರದ್ದು ಪಡಿಸಿದೆ. ಹೈಕೋಟರ್್ನ ಈ ತೀಪರ್ು ನಿಜಕ್ಕು ಆಘಾತಕಾರಿಯಾದದ್ದು. ಪ್ರಕರಣದ ಭೀಕರತೆಯು ಅಪರೂಪದಲ್ಲೆ ಅಪರೂಪ ಎನ್ನುವಂತಹದ್ದು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಲಯ ನೀಡಿದ್ದ ಮರಣದಂಡನೆಯ ತೀಪರ್ು ಸರಿಯಾಗೆ ಇತ್ತು. ಆದರೆ ಹೈಕೋಟ್ರ್  ಈಗ ಇದಕ್ಕೆ ವ್ಯತಿರಿಕ್ತ ತೀಪರ್ು ನೀಡಿದೆ!

ಹೈಕೋಟರ್್ನ ಈ ತೀಪರ್ಿನ ವಿರುದ್ಧ ಸುಪ್ರೀಂ ಕೊಟರ್್ನಲ್ಲಿ ಮೇಲ್ಮನವಿ ಸಲ್ಲಿಸುವುದೊಂದೆ ಈಗ ಉಳೀದಿರುವ ದಾರಿ. ಈ ನಿಟ್ಟಿನಲಿ ಮಹಾರಾಷ್ಟ್ರ ಸಕರ್ಾರ ಕ್ರಮ ಕೈಗೊಳ್ಳಬೇಕಿದೆ.  ಸಿಬಿಐ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ದುರ್ಬಲ ವಾದ ಮಂಡಿಸಿರುವ ಆರೋಪ ಕೇಳೀ ಬಂದಿದೆ. ಈ ನಿಟ್ಟಿನಲಿ ಕೇಂದ್ರ ಸಕಾರ ಕೂಡ ಮಧ್ಯೆ ಪ್ರವೇಶಿಸಬೇಕಾಗಿದೆ. ದೌರ್ಜನ್ಯಕೋರರು ಮುಂದೆ ದೌರ್ಜನ್ಯ  ಮಾಡಲು ಹೆದರಬೇಕಾದರೆ ಖೈರ್ಲಂಜಿಯ ಆರೋಪಿಗಳಿಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ಈ ನಿಟ್ಟಿನಲಿ ನ್ಯಾಯಲಯದ ಈ ತೀಪರ್ಿನ ವಿರುದ್ಧ ಶೋಷಿತ ಸಮುದಾಯ ದನಿಯೆತ್ತಬೇಕಿದೆ.

ಖೈಲರ್ಾಂಜಿಯಂತಹ ಪ್ರಕರಣಗಳು ಈಗ ನಿಂತಿದೆ ಎಂದಲ್ಲ . ಮೊನ್ನೆ ತುಮಕೂರಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆ ಹೊನ್ನಮ್ಮ ಳನ್ನು ಕಲ್ಲಿನಿಂದ ಜಜ್ಜಿ ಕೊಂದದ್ದು ಖೈಲರ್ಾಂಜಿಯ ಪುನರಾವರ್ತನೆಯಲ್ಲದೆ  ಬೇರೇೆನಲ್ಲ. ಚರಂಡಿಯಲ್ಲಿ ಅರೆಜೀವದಿಂದ ಬಿದ್ದಿದ್ದ ಹೊನ್ನಮ್ಮ ‘ನೀರು, ನಿರು’ ಎಂದು ಅಂಗಲಾಚಿದಾಗ ದೌರ್ಜನ್ಯಕೊರ ಮನಸ್ಸುಗಳು ಮತ್ತೊಂದು ಕಲ್ಲು ಎತ್ತಿಹಾಕಿದ್ದು, ಖೈಲರ್ಾಂಜಿಯಲ್ಲಿ ಪ್ರಿಯಾಂಕಳ ಮಮರ್ಾಂಗಕ್ಕೆ  ಚೂಪಾದ ದೊಣ್ಣೆಯಿಂದ ಚುಚ್ಚಿದ್ದು, ಬಹುಶಃ ಇಂತಹ ಭೀಬತ್ಸ ನೆನಪುಗಳಷ್ಟೆ ದಲಿತರಿಗೆ ಉಳಿಯುವುದು. ನ್ಯಾಯ? ಶುದ್ಧ ಮರೀಚಿಕೆಯಷ್ಟೆ.

ರಘೋತ್ತಮ ಹೊ. ಬ

ಚಾಮರಾಜನಗರ-571313

ಮೊಬೈಲ್ – 9481189116

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ


ಮುಚ್ಚಿಡಲ್ಪಟ್ಟ ಅಂಬೇಡ್ಕರ್ ಭವ್ಯ ಇತಿಹಾಸ

ರವಿವಾರ – ಜೂನ್ -27-2010

varthabharathi

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ. ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು. ಬಾಲ್ಯ ದಿಂದಲೇ ಅಸ್ಪಶತೆಯ ನೋವನ್ನು ಅನುಭವಿಸಿ ದರು. ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು.

ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರ್ ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿ ಕೊಂಡರು. ಅಸ್ಪಶರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದ ಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೇ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಲಾಗುತ್ತಿದೆ!

ಹಾಗಿದ್ದರೆ ಅಂಬೇಡ್ಕರ್‌ರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕದ ಅಧ್ಯಕ್ಷ ಜಾರ್ಜ್‌ಬುಷ್ ‘ಗಾಂಧಿ, ಠಾಗೋರ್ ಮತ್ತು ನೆಹರೂ’ರವರನ್ನು ನವ ಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕಬ್ಜರನ್ನಾಗಿ ಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರ ವಾಗಿ ನಡೆಯುತ್ತಿರುವಾಗ ಬುಷ್‌ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿ ಯಾರು? ಈ ಹಿನ್ನೆಲೆಯಲ್ಲಿ ಹೊರಜಗತ್ತಿಗೆ ಅಂಬೇಡ್ಕರ್‌ರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

ಹಾಗಿದ್ದರೆ ಅಸ್ಪಶರ ಉದ್ಧಾರವನ್ನು ಸಂವಿ ಧಾನ ರಚನೆಯನ್ನು ಹೊರತುಪಡಿಸಿ ಅಂಬ್ಕೇಡರ್‌ರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾ ಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ, ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್.

ಈ ದೇಶದ ಮಹಿಳೆಯ ರಿಗೆ ‘ಹಿಂದೂ ಸಂಹಿತೆ ಮಸೂದೆಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಸ್ಥಾಪಿಸಲು ಕಾರಣರಾ ದದ್ದು ಕೂಡ ಅಂಬೇಡ್ಕರ್‌ರೆ.

ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ರೂಪಿಸಿದ್ದು. ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಅಂಬೇಡ್ಕರ್‌ರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೇ!

ಉದಾಹರಣೆಗೆ ಹೇಳುವುದಾದರೆ 1945ರಲ್ಲಿ ಎರಡನೆ ಮಹಾಯುದ್ಧದ ನಂತರ ಈ ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ ಸಭೆ’ ಬ್ರಿಟಿಷ್ ಗವರ್ನರ್ ಜನರಲ್‌ರಿಂದ ರಚಿಸಲ್ಪಟ್ಟಿತು. ಅಂಬೇ ಡ್ಕರ್ ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ ‘ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂ ಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು.

ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅದ್ಭುತವಾದ ಸಾಧನೆ ಮಾಡಿದ್ದಾರೆ. 1942ರಿಂದ 1946ರ ವರೆಗೆ ಗವರ್ನರ್ ಜನರಲ್‌ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್‌ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ!

ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾ ಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನ ದಲ್ಲಿಟ್ಟುಕೊಂಡು ಅವರು 1944ರಲ್ಲೆ ‘ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು.

ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸುರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೇನೂ ಅಲ್ಲ. ದುರಂತ ವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

ಅಂಬೇಡ್ಕರ್‌ರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ (ಆರ್‌ಬಿಐ)ಗೆ ಸಂಬಂಧಿಸಿದ್ದು. ತಮ್ಮ ‘ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ’ ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೊರಟ್‌ರವರು ಇದನ್ನು ದಾಖಲಿಸುತ್ತಾರೆ. ”ಆರ್‌ಬಿಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್‌ಬಿಐನ ಮಾರ್ಗದರ್ಶಿ ಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ.

ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ’ ಎನ್ನುತ್ತಾರೆ ಸುಖದೇವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್’ ಆಯೋಗದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಅಂಬೇಡ್ಕರ್ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‌ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ, ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು.

ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದುದನ್ನು ಗಮನಿಸಿ ಅಂಬೇಡ್ಕರ್‌ರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ. ತನ್ಮೂಲಕ 1934ರಲ್ಲಿ ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳು ತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

ಮತ್ತೊಂದು ವಿಷಯ ಇಲ್ಲಿ ಹೇಳಲೇಬೇಕಾಗಿದೆ. ಇತ್ತೀಚೆಗೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ 150ನೆ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್‌ರ ಕೊಡುಗೆಯಾದರೂ ಏನು? ಎಂಬುದು.

ಖಂಡಿತ ಏನೂ ಇಲ್ಲ. ಎಸ್.ಬಿ.ಐ. ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್‌ರಿಂದ ‘ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು’ ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು!

ದುರಂತ ವೆಂದರೆ ಅಸ್ಪಶತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿಸಾಕ್ತಿಗಳಿಗೆ ಅಂಬೇಡ್ಕರ್‌ರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೆ!

ಇನ್ನು ಈ ನಡುವೆ ಅಂತರಾಜ್ಯ ಸಮಸ್ಯೆ ಗಳ ಬಗ್ಗೆ ಅಂಬೇಡ್ಕರ್‌ರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೇ ಅಂಬೇಡ್ಕರ್ ತಮ್ಮ ‘ಭಾಷಾವಾರು ಪ್ರಾಂತ್ಯ ಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡು ತ್ತಾರೆ.

ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾ ದದ್ದು. ಯಾಕೆಂದರೆ 2000ದಲ್ಲಿ ಮಧ್ಯಪ್ರದೇಶದಿಂದ ಛತ್ತೀಸ್‌ಗಢ ಮತ್ತು ಬಿಹಾರದಿಂದ ಜಾರ್ಖಂಡ್ ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಅಂಬೇಡ್ಕರ್‌ರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕೆ ಅಂಬೇಡ್ಕರ್‌ರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೊರೆ ಹೋಗಬೇಕಷ್ಟೆ.)

ಅಂಬೇಡ್ಕರ್‌ರನ್ನು ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ ಒಂದು ಬೃಹತ್ ಸಮುದಾಯವನ್ನು, ಅದರ ಭವ್ಯ ಇತಿಹಾಸವನ್ನು ಅದರಿಂದ ಮರೆಮಾಚಿ ಮಾನಸಿಕ ಗುಲಾಮಗಿರಿಗೆ ತಳ್ಳುವ ವ್ಯವಸ್ಥಿತ ಸಂಚಿದು. ಈ ನಿಟ್ಟಿನಲ್ಲಿ ಶೋಷಿತ ಸಮುದಾಯ ಅಂತಹ ವ್ಯವಸ್ಥಿತ ಸಂಚಿಗೆ ಬಲಿಯಾಗಬಾರದು.

‘ನಮಗೇಕೆ ಇದನ್ನು ಹೇಳಲಿಲ್ಲ’ ಎಂದು ಮುಂದಿನ ಪೀಳಿಗೆ ಕೇಳುವಂತಾಗಬಾರದು. ಆದಕಾರಣ ಶೋಷಿತ ಸಮುದಾಯ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ. ಅಂಬೇಡ್ಕರ್‌ರ ಭವ್ಯ ಇತಿಹಾಸವನ್ನು, ಪ್ರತಿಯೊಂದು ಸಾಧನೆಯನ್ನು ಇಡೀ ಜಗತ್ತಿಗೆ ಸಾರಿ ಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

-ರಘೋತ್ತಮ ಹೂ.ಬ. ಚಾಮರಾಜನಗರ, Ph: 09481189116